ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಾರ್ಮಿಕರೇ ನಿಮಗಿದೋ ನಮನ

ಶ್ರಮಿಕರಿದ್ದರೇನೇ ಶ್ರೀಮಂತರು
ಶ್ರಮವಹಿಸಿ ದುಡಿವವರೆ ಕಾರ್ಮಿಕರು
ಕೆಲಸದಲಿ ಮೇಲುಕೀಳೆಂಬ ಭಾವವಿಲ್ಲ
ದುಡಿಯದಿರೆ ಹಸಿದ್ಹೊಟ್ಟೆಗೆ ಅನ್ನವಿಲ್ಲ

ಮಳೆಗಾಳಿ ಎನದೇ ಉತ್ತು ಬಿತ್ತುವನು ರೈತ
ಜಗದ ಜನರಿಗವನೆ ನಿಜದಿ ಅನ್ನದಾತ
ತನಗಾಗದೆಂದು ಹಿಂದೆ ಸರಿದರೆ ಅವ
ತರುವುದೆಲ್ಲಿಂದ ಹೇಳಿ ಹಿಡಿ ಅನ್ನವ?

ಹೊತ್ತು ಸಿಮೆಂಟು ಮರಳು ಜಲ್ಲಿಕಲ್ಲು
ಇಟ್ಟಿಗೆ ಮೇಲಿಟ್ಟಿಗೆ ಪೇರಿಸಿದಾಗ ಮಹಲು
ಕ್ಷಮತೆಯಲಿ ಕಟ್ಟುವನವ ಸುಂದರ ಭವನವ
ಆದರವ ಹರುಕು ಗುಡಿಸಿಲಲ್ಲೇ ವಾಸಿಸುವ

ಹಗಲಿರುಳೆನ್ನದೆ ದುಡಿವ ಸೈನಿಕರು
ಪ್ರಾಣಪಣಕ್ಕಿಟ್ಟು ಕಾಪಿಡುವ ಪಾಲಕರು
ಸಮಾಜವ ನಿರೀಕ್ಷಿಸುವನವ ಆರಕ್ಷಕರ
ಆಪತ್ಕಾಲಕ್ಕಿವನೇ ಸಕಲರ ಜೀವರಕ್ಷಕ

ನಿಜ, ವೈದ್ಯೋ ನಾರಾಯಣೋ ಹರಿಃ.!
ಆರೋಗ್ಯವೇ ಸಕಲ ಭಾಗ್ಯಗಳ ಐಸಿರಿ.!
ದುಡಿವ ಜಗಕೆ ತಾನೂ ಅಭಿಯಂತರ.!
ನಿರಂತರ ನಿಲ್ಲದ ನಡೆಯ ಆವಿಷ್ಕಾರ.!

ಎಲ್ಲರದ್ದೊದ್ದೊಂದೊಂದು ಕಾಯಕ
ಎಲ್ಲವೂ ಒಂದಕ್ಕೊಂದು ಪೂರಕ
ಶ್ರೇಷ್ಠ ಕನಿಷ್ಟವಾವುದೂ ಇಲ್ಲ ತಿಳಿ
ಎಲ್ಲರನ್ನೂ ಗೌರವಿಸುವುದ ಕಲಿ

ಕಾರ್ಮಿಕರೇ ದೇಶದ ದೊಡ್ಡ ಆಸ್ತಿ
ನಾನುನಾನೆಂದು ಮಾಡದಿರಿ ಕುಸ್ತಿ
ಕಾಯಕವಿದು ಎಲ್ಲವೂ ಸರಿ ಸಮಾನ
ಕಾರ್ಮಿಕರೇ ನಿಮಗಿದೋ ನಮನ

  • ಎಮ್. ಹೆಚ್. ಹುಡೇದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ