ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆಧುನಿಕ ವಚನಗಳು.


‌‌ ೧.
ಅಯ್ಯಾ ಸ್ವಲ್ಪ ಇತ್ತ ಕಡೆ ನೋಡಯ್ಯ,
ನಾವಿರುವ ಲೋಕವು
ಇದೇ ಏನಯ್ಯ?
ಇದು ಪ್ರಜಾಪ್ರಭುತ್ವದ
ರಾಜ್ಯವೇನಯ್ಯ,!
ಇದು ಅಕ್ರಮಗಳ
ರಾಜ್ಯವಾಗಿದೆ ನೋಡಯ್ಯ!
ಇದು ಹಗರಣಗಳ
ಸರಮಾಲೆಯಯ್ಯ!
ಮುಂದೇನಿದೆಯೋ,
ನಾ ಕಾಣೆನೆಂದ ಶಿವ ಶಿವಾ!.

೨.
ಪಂಪ ಮಹಾಕವಿ ಹೇಳಿದ್ದ
” ಮಾನವ ಕುಲಂ ತಾನೊಂದೇ ವಲಂ ” ಈ ಮಾತೀಗ ಅರ್ಥವ
ಕಳೆದುಕೊಂಡಿದೆ ಅಯ್ಯ,
ಒಂದೊಂದು ಕುಲವೂ
ಸಹಸ್ರಾರು ಕುಲಗಳಾಗಿಹುದಯ್ಯಾ, ಎಂದ ಶಿವ ಶಿವಾ!

೩.

ಕಚ್ಚಾಡುತಿರುವರಿಲ್ಲಿ
ನಾ ಮೇಲು,ನೀ ಕೀಳೆಂದು
ಇವರಿಗೆ ಬುದ್ಧಿ ಬರುವುದೆಂದೋ,?!
ಆ ಧರ್ಮ,ಈ ಧರ್ಮ
ಸ್ವ ಧರ್ಮ ವೆನ್ನುತ್ತಾ,
ಅಧರ್ಮದ ದಾರಿಯಲ್ಲೇ
ಸಾಗುತ್ತಿರುವರಲ್ಲ ಶಿವ ಶಿವಾ!

    ೪.
ಆತ್ಮ ಯಾವ ಕುಲ,?
ಜೀವ ಯಾವ ಕುಲ?

ಗಾಳಿ ಯಾವ ಕುಲ,?
ಎಂದೆಲ್ಲ ಪ್ರಶ್ನಿಸಿ,ಮಾಡಿದರು
ಅಂದು ಬಸವಾದಿ ಪ್ರಮಥರು
ಸಾಮಾಜಿಕ ಕ್ರಾಂತಿ! ಆದರಿಂದು?, ನೀ ಮೇಲು ಕುಲ
ನೀ ಕೀಳು ಕುಲ ಎಂದೆಲ್ಲ ಹೇಳುತ್ತಾ, ಮಾಡುತಿಹರು
ಸಮಾಜ ವಿಕೃತಿ! ಇವರು
ಆಧುನಿಕರು ನೋಡೆಂದ
ಶಿವ ಶಿವಾ!

  • ಶಿವಪ್ರಸಾದ್ ಹಾದಿಮನಿ ✍️.
    ಕನ್ನಡ ಉಪನ್ಯಾಸಕರು,
    ಕೊಪ್ಪಳ. ೫೮೩೨೩೧.
    ಮೊಬೈಲ್ ಸಂಖ್ಯೆ.
    ೭೯೯೬೭೯೦೧೮೯.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ