
ಸಿದ್ಧಾರ್ಥನಾಗಿ ಜನಿಸಿ ಧರೆಗಿಳಿದು ಬುದ್ಧ ಬಂದ
ನಡುರಾತ್ರಿ ನಿದ್ದೆಯಿಂದೆ ಎದ್ದು ಕಾಡಿನತ್ತ ನಡೆದ
ಜೀವನದ ಸತ್ಯ ಮಿಥ್ಯಗಳ ಹುಡುಕ ಬಯಸಿದ
ಭೋಗ ಭಾಗ್ಯಗಳ ತೊರೆದು ಮುಂದೆ ಸಾಗಿದ.
ಶವಯಾತ್ರೆ, ರೋಗಿ, ಸನ್ಯಾಸಿಯನ್ನು ಕಂಡು
ಮುಂದೆ ಸಾಗಿದ ಮನದ ನೋವು ಉಂಡು
ಮರುಗಿ ನಡೆದ ದುಃಖದ ಮೂಲ ಹುಡುಕಿಕೊಂಡು
ಅಲೆದಲೆದು ಕುಳಿತ ಗಯಾದ ಕಾಡನ್ನು ಕಂಡು.
ಕಾಮ ಕ್ರೋಧ ಮಧ ಮತ್ಸರಗಳು ಕಳಚಿದ
ಮಡದಿ ಮಕ್ಕಳ ವಿಲಾಸಿ ಜೀವನ ದೂರ ಸರಿಸಿದ
ದುಃಖಕ್ಕೆ ಮೂಲ ಕಾರಣ ಹುಡುಕ ಬಯಸಿದ
ಆಸೆಯೇ ದುಃಖಕ್ಕೆ ಕಾರಣ ಎಂದು ಜಗಕೆ ಸಾರಿದ.
ಬೋಧಿ ವೃಕ್ಷದ ಕೆಳಗೆ ಆಸರೆಯನ್ನು ಪಡೆದ
ಜಗದ ಜಂಜಾಟಕೆ ಉತ್ತರ ಹುಡುಕಲು ಧ್ಯಾನಸ್ಥನಾದ
ಧ್ಯಾನದಿ ಜ್ಞಾನೋದಯ ಹೊಂದಿ ಗೌತಮ ಬುದ್ಧನಾದ
ಗುರಿಯ ಗೆದ್ದು ಬೌದ್ಧ ಧರ್ಮದ ಸಂಸ್ಥಾಪಕನಾದ
- ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
(ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ,
ದೂರವಾಣಿ ಸಂಖ್ಯೆ: 9740199896.
