ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಾರ ಹುಣ್ಣಿಮೆಯ ಪ್ರಯುಕ್ತ ಎತ್ತುಗಳ ಕರಿ ಹರಿಯುವ ಸಂಪ್ರದಾಯ 

ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಕಾರ ಹುಣ್ಣಿಮೆ ವಿಶೇಷ ಎತ್ತುಗಳ ಕರಿ ಹರಿಯುವ ಸಂಭ್ರಮ ಕಾರ್ಯಕ್ರಮ ನೆರವೇರಿಸಲಾಗುತ್ತದೆ ಎಂದು ರೈತ ಈಶಪ್ಪ ಸಬರದ ಮಾತನಾಡಿ ಮುಂಗಾರು ಆರಂಭದ ಮೊದಲ ಹಬ್ಬವೇ ಕಾರ ಹುಣ್ಣಿಮೆ ಆಗಿರುವ ಕಾರಣ, ರೈತರು ಕೃಷಿ ಕಾರ್ಯದ ಜೊತೆಗಾರ ಎತ್ತುಗಳಿಗೆ ನಮಿಸುವ ಹಬ್ಬ ಇದಾಗಿದೆ. ಬೆಳಿಗ್ಗೆಯಿಂದಲೇ ರೈತರು ತಮ್ಮ ಎತ್ತು ಹಾಗೂ ಹೋರಿಗಳ ಮೈ ತೊಳೆದು, ಬಣ್ಣ ಹಚ್ಚಿ ಸಿಂಗಾರಗೊಳಿಸಿ ಕರಿ ಹರಿಯುವ ದೃಶ್ಯ ರೈತಾಪಿ ವರ್ಗದವರಿಗೆ ರೋಮಾಂಚನವಾಗುತ್ತದೆ.
ಸಂಜೆ ಎತ್ತುಗಳನ್ನು ಓಡಿಸಿ ಕರಿ ಹರಿಯುತ್ತಾರೆ. ಅಲ್ಲಿ ಯಾವ ಬಣ್ಣದ ಎತ್ತು ಮುಂದೆ ಬರುವುದೋ ಆ ಬೆಳೆ ಹುಲುಸು. ಅಂದರೆ ಕೆಂದು ಬಣ್ಣದ ಎತ್ತು ಮುಂದೆ ಬಂದರೆ ಮುಂಗಾರು ಫಸಲು, ಬಿಳಿ ಬಣ್ಣದ ಎತ್ತು ಮುಂದೆ ಬಂದರೆ ಬಿಳಿ ಜೋಳದ ಫಸಲು ಹೆಚ್ಚಿಗೆ ಬೆಳೆಯುತ್ತವೆ ಎನ್ನುವುದು ಕೃಷಿಕರ ನಂಬುಗೆ. ಹಬ್ಬದ ಆಚರಣೆಯಲ್ಲಿ ಮೊದಲು ಕರಿ ಹರೆದ ಎತ್ತಿಗೆ ಬಹುಮಾನ ಮತ್ತು ದ್ವಿತೀಯ ಕರಿ ಹರೆದ ಎತ್ತಿಗೆ ಎರಡನೇ ಬಹುಮಾನ ನೀಡಲಾಗುತ್ತದೆ
ಅಂತೂ ಈ ಕಾರ ಹುಣ್ಣಿವೆ ಎನ್ನುವದು ಜಾನುವಾರುಗಳಿಗಾಗಿ ಹಾಗೂ ಕೃಷಿ ಉಪಕರಣಗಳ ಜೋಪಾನಕ್ಕಾಗಿಯೇ ಮಾಡಿದ ಹಬ್ಬವಾಗಿದೆ ಎಲ್ಲಾ ರೈತಾಪಿ ವರ್ಗದವರು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ರೈತನಿಗೆ ಅನ್ನ ನೀಡುವ ಎತ್ತುಗಳ ಸಂಭ್ರಮ ಆಚರಣೆಯಲ್ಲಿ ಭಾಗವಹಿಸಬೇಕೆಂದು ಮಾತನಾಡಿದರು.
ಹಬ್ಬದ ವಿಶೇಷವಾಗಿ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ರವೀಂದ್ರ ಬಾಗಲಕೋಟೆ ಅವರಿಗೆ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ರೈತರಾದ ಹನುಮಂತ ಮರಡಿ, ಬಸಪ್ಪ ಲಾಳಗುಂಡರ್, ಬಸಪ್ಪ ಸಬರದ, ಬಸಪ್ಪ ದಿವಟರ, ಯಲ್ಲಪ್ಪ ಕಲಾಲ್, ರೇವಣಪ್ಪ ಹಟ್ಟಿ, ಶರಣಪ್ಪ ಯತ್ನಟ್ಟಿ ಹಾಗೂ ಇತರರು ಇದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ