ಕೊಪ್ಪಳ/ ಕುಕನೂರು : ಜಂಟಿ ಆಯುಕ್ತರು ಸಾರಿಗೆ ಕಲಬುರ್ಗಿ ಇವರ ಆದೇಶದ ಮೆರೆಗೆ ಅಕ್ರಮ ಮರಳು ಸಾಗಾಣಿಕೆ ಮಾಡುವ ಟಿಪ್ಪರ್ ಗಳ ಮೇಲೆ ಹಾಗೂ ವಾಹನ ತೆರಿಗೆ ರೋಡ್ ಟ್ಯಾಕ್ಸ್ ಕಟ್ಟಲಾರದ ವಾಹನಗಳ ವಿರುದ್ಧ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಲು ಸಾರಿಗೆ ಇಲಾಖೆಯ ಮೊಟರ್ ವಾಹನ ಹಾಗೂ ವಾಹನಗಳ ಪರಿಶೀಲನೆಗಾಗಿ ಬಳ್ಳಾರಿ ವಿಭಾಗೀಯ ಮೋಟಾರು ವಾಹನ ನಿರೀಕ್ಷಕಿ ಉಮಾ ಎಸ್ ಕೊಂಪಿ
ಇವರು ನಗರದಲ್ಲಿ ಸ್ಕೂಲ್ ಬಸ್ ಮತ್ತು ಎರಡು ಟಿಪ್ಪರ್ ಗಳನ್ನು ಜಪ್ತಿ ಮಾಡಿದ್ದಾರೆ.
ಆಟೋಗಳನ್ನು ಮತ್ತು ಶಾಲೆಯ ವಾಹನಗಳನ್ನು ಸೂಕ್ತ ದಾಖಲೆಗಳೊಂದಿಗೆ ಮೋಟರ್ ವಾಹನ ಕಾಯ್ದೆ ಅಡಿಯಲ್ಲಿ ವಾಹನಗಳನ್ನು ಇಟ್ಟುಕೊಳ್ಳಬೇಕು ಎಂದು ವಾಹನ ಮಾಲೀಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ನಗರದಲ್ಲಿ ಅನೇಕ ಆಟೋಗಳು ಮತ್ತು ಲಾರಿ, ಕಾರು, ಟ್ರ್ಯಾಕ್ಸ್, ಟಿಪ್ಪರ್ ಗಳು ಸರಿಯಾದ ರೀತಿಯಲ್ಲಿ ರೋಡ್ ಟ್ಯಾಕ್ಸ್ ಮತ್ತು ಇನ್ಸೂರೆನ್ಸ್ ಡ್ರೈವಿಂಗ್ ಲೈಸೆನ್ಸ್ ಹೀಗೆ ಅನೇಕ ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಓಡಾಡುತ್ತಿವೆ ಇದರ ಬಗ್ಗೆ ಸಾರ್ವಜನಿಕರು ಸರಿಯಾದ ವಾಹನಗಳ ದಾಖಲಾತಿಗಳು, ಮತ್ತು ವಾಹನ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.
ಕೊಪ್ಪಳ ವಿಭಾಗೀಯ ಮೋಟರ್ ವಾಹನ ನಿರೀಕ್ಷಕ
ಅಧಿಕಾರಿ ವಿಜೇಂದ್ರ ಧವಳಗಿ ಮಾತನಾಡಿ ಕೊಪ್ಪಳ, ಕಲಬುರಗಿ, ರಾಯಚೂರು, ಹೊಸಪೇಟೆ, ಜಂಟಿ ಸಾರಿಗೆ ಕಲಬುರಗಿ ಇವರ ಆದೇಶದ ಮೇರೆಗೆ ಕೊಪ್ಪಳ ಜಿಲ್ಲೆಯಾದ್ಯಂತ ಮತ್ತು ತಾಲೂಕು ಪಟ್ಟಣಗಳಲ್ಲಿ ತಪಾಸಣೆ ನೆರವೇರುತ್ತಿದ್ದು, ಪ್ರತಿಯೊಬ್ಬರೂ ಕಡ್ಡಾಯವಾಗಿ ವಾಹನಗಳ ದಾಖಲಾತಿಗಳನ್ನು ಹೊಂದಿರಬೇಕು ಎಂದು ಹೇಳಿದರು.
ವಾಹನಕ್ಕೆ ಸಂಬಂಧಪಟ್ಟ ದಾಖಲಾತಿಗಳು ಇಲ್ಲದೆ ಇದ್ದ ಪಕ್ಷದಲ್ಲಿ ವಾಹನ ಮಾಲೀಕರಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
- ಕರುನಾಡ ಕಂದ



















