ಡಾ. ಮಲ್ಲೇಶ್ ಅವರಿಗೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯವು ಪಿ. ಹೆಚ್. ಡಿ ಪದವಿ ( ಡಾಕ್ಟರೇಟ್ ಪದವಿ ) ನೀಡಿದೆ. ಇವರು ಕನ್ನಡದಲ್ಲಿ ಗಜಲ್ ಕಾವ್ಯ : ವಿಭಿನ್ನ ಆಯಾಮಗಳು ( ಉತ್ತರ ಕರ್ನಾಟಕದ ಗಜಲ್ ಕವಿಗಳನ್ನು ಅನುಲಕ್ಷಿಸಿ ) ಎಂಬ ವಿಷಯ ಕುರಿತು ಡಿ.ಡಿ. ನಗರಕರ. ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಶಿವಾನಂದ ಮಹಾವಿದ್ಯಾಲಯ ಕಾಗವಾಡ ತಾ. ಕಾಗವಾಡ ಜಿ. ಬೆಳಗಾವಿ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಿ ಮಹಾಪ್ರಬಂಧವನ್ನು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ್ದರು. ಪ್ರಸ್ತುತ ಇವರು ರಾಯಚೂರಿನ ಸರಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಸುತ್ತಿದ್ದಾರೆ.
ಡಾ. ಮಲ್ಲೇಶ್ ಅವರು ರಾಯಚೂರು ತಾಲ್ಲೂಕಿನ ಉಡಮಗಲ್ ಗ್ರಾಮದವರು. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಉನ್ನತ ಪದವಿ ಪಡೆದಿರುವುದು ಬಹಳ ಶ್ಲಾಗಿನಿಯವಾದದ್ದು. ಇವರು ಹಳ್ಳಿಯ ಪ್ರತಿಭೆ. ಬಹಳ ಬಡತನದಿಂದ ಬೆಳೆದಿದ್ದಾರೆ. ಪ್ರತಿಭೆ ಹುಟ್ಟುವುದು ಗುಡಿಸಲಗಳಲ್ಲಿ ಹೊರತು ಬಂಗಲೆಗಳಲ್ಲಿ ಎನ್ನುವುದಕ್ಕೆ ಉತ್ತಮವಾದ ಉದಾಹರಣೆ ಅಂದರೆ ಡಾ. ಮಲ್ಲೇಶ್ ಅವರದು. ಇವರ ಸಾಧನೆಯನ್ನು ಇವರ ಬಂದು ಬಳಗ, ಗೆಳೆಯರು ಮತ್ತು ಸಹದ್ಯೋಗಿ ಮಿತ್ರರು ಇವರ ಶ್ರಮವನ್ನು ಮೆಚ್ಚಿ ಹರ್ಷವನ್ನು ವ್ಯಕ್ತಪಡಿಸಿ ಶುಭಾಶಯಗಳನ್ನು ಕೊರಿದ್ದಾರೆ.
- ಕರುನಾಡ ಕಂದ



















