ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ರೈತ ಹೋರಾಟಗಾರ್ತಿ ಜಯಶ್ರೀ ಗುರನ್ನವರ್ ಅವರಿಗೆ ಮೌನ ಆಚರಣೆ ಸಲ್ಲಿಸಿದ ತಾಲ್ಲೂಕಿನ ರೈತ ಮುಖಂಡರು

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರದ ಕೋಟೆ ವೃತ್ತದ ಬಳಿ ನಗರದ ಎಲ್ಲಾ ತಾಲ್ಲೂಕಿನ ರೈತ ಮುಖಂಡರು ಭಾಗಿಯಾಗಿ ರೈತ ಹೋರಾಟಗಾರ್ತಿ ಜಯಶ್ರೀ ಗುರನ್ನವರ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು.
ರಾಜ್ಯ ಮಟ್ಟದ ಹೋರಾಟಗಾರ್ತಿ ಕಬ್ಬಿನ ಭಾಗ್ಯ ವಿಚಾರದಲ್ಲಿ ಭಾಗವಹಿಸಿದ್ದರು ಹಾಗೂ ಕೇಂದ್ರ ಸರ್ಕಾರ ರೈತ ಮಸೂದೆಗಳನ್ನು ಮಾಡುವಾಗ ವಿರೋಧವಾಗಿ ಲಕ್ಷಾಂತರ ಮಹಿಳೆಯರನ್ನು ರಾಜ್ಯದಲ್ಲಿ ಮುಂದಿಟ್ಟ ನೇರ ದಿಟ್ಟ ಮಹಿಳೆ ಜಯಶ್ರೀ ಗುರನ್ನವರ್ ಅವರು ಹೃದಯಘಾತವಗಿ‌ ನಿಧನ ಹೊಂದಿದ್ದಾರೆ.
ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಆ ಕುಟುಂಬಕ್ಕೆ ನೀಡಲಿ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರ ಹಳ್ಳಿ ಪ್ರತೀಶ್ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್,ತಾಲೂಕು ಅಧ್ಯಕ್ಷ ಎ.ಎನ್ ಮುನೇಗೌಡ,ಕಾರ್ಯದರ್ಶಿ,ನವೀನಚಾರ್ಯ,ಸಂತೇಕಲ್ಲಹಳ್ಳಿ ಆಂಜಿನಪ್ಪ,ಎಸ್.ಎನ್, ಮಾರಪ್ಪ,ದ್ಯಾವಪ್ಪ,ಹೊಬಳಿ ಅಧ್ಯಕ್ಷರಾದ ದೊಡ್ಡತೇಕಹಳ್ಳಿ ಆಂಜಿನಪ್ಪ,ಡಿವು,ನಾರಾಯಣಸ್ವಾಮಿ ಹಾಗೂ ಇತರರು ಉಪಸ್ದಿತರಿದ್ದರು.

ವರದಿ ಗಗನ್ ಸಾಮ್ರಾಟ್ ಶಿಡ್ಲಘಟ್ಟ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ