ಕೊಟ್ಟೂರು :ಪಟ್ಟಣದ ಶ್ರೀಗುರುಕೊಟ್ಟೂರೇಶ್ವರ ಸ್ವಾಮಿಯ ದೇವಾಸ್ಥಾನದಲ್ಲಿ ದಿ. 22-06-2026 ನೇ ಸೋಮವಾರ ದಂದು ಶ್ರೀ ವಿಜಯಾನಂದ ಕಾಶಪ್ಪನವರಿಗೆ ಮುಖ್ಯಮಂತ್ರಿ ಇವರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗಲಿ ಎಂದು ಪಟ್ಟಣದ ಶ್ರೀ ಕೆ. ಶಿವಕುಮಾರ್ ಗೌಡ್ರು ತಾಲೂಕು ಯುವ ಕಾಂಗ್ರೆಸ್ ಘಟಕ ಪ್ರಧಾನ ಕಾರ್ಯದರ್ಶಿ ಹಾಗೂ ಪಂಚಮಸಾಲಿ ಮುಖಂಡರು ಇವರ ನೇತೃತ್ವದಲ್ಲಿ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಹಯೋಗದಲ್ಲಿ ಸ್ವಾಮಿಗೆ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ್ ಯುವ ಘಟಕ ಪ್ರಧಾನ ಕಾರ್ಯದರ್ಶಿ ಕೆ. ಶಿವಕುಮಾರಗೌಡ ಮಾತನಾಡಿ ಶ್ರೀ ವಿಜಯಾನಂದ ಕಾಶಪ್ಪನವರು ಪ್ರಾಮಾಣಿಕರಲ್ಲಿ ಪ್ರಾಮಾಣಿಕರು ಇವರಿಗೆ ಮುಖ್ಯಮಂತ್ರಿಗಳ ಸಚಿವಸಂಪುಟದಲ್ಲಿ ಸಚಿವಸ್ಥಾನ ಸಿಗಲೇಬೇಕೆಂದು ಕಾಶಪ್ಪನವರಿಗೂ ಮತ್ತು ಕಾಂಗ್ರೆಸ್ ಪಕ್ಷಕ್ಕೂ ಜಯ ಘೋಷಣೆ ಕೂಗಿದರು.
ವಿಜಯನಗರ ಜಿಲ್ಲೆ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಅಡಕಿ ಮಂಜುನಾಥ ರವರು ಮಾತನಾಡಿ ವಿಜಯಾನಂದ ಕಾಶಪ್ಪನವರು ತಮ್ಮ ತಂದೆಯ ಕಾಲದಿಂದಲೂ ಈಗಲೂ ಕೂಡಾ ಅವರ ಕುಟುಂಬ ಸಮೇತರಾಗಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ ಇಂತಹ ಪ್ರಾಮಾಣಿಕ ವ್ಯಕ್ತಿತ್ವ ಹೊಂದಿರುವ ಇವರಿಗೆ ಮುಖ್ಯಮಂತ್ರಿಗಳ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗಲಿ ಎಂದು ಮಾತನಾಡಿದರು.
ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ಅಶೋಕ್ ಇಂಜಿನಿಯರ್, ವಿರೇಂದ್ರ ಪಾಟೇಲ್, ಬಿ. ಸತೀಶ್, ಕೊಟ್ರಗೌಡ, ಅಭಿಲಾಷ್ ಗೌಡ, ವಿಶ್ವನಾಥ್ ಕೂಡ್ಲಿಗಿ, ಹಂಪಳ್ಳಿ ವಿನಯ್, ರವಿಕುಮಾರ್, ನವೀನ್ ಕುಮಾರ್ ಆರ್. ಎಮ್ ಹಾಗೂ ಇನ್ನಿತರರು ಪೂಜೆಯಲ್ಲಿ ಭಾಗವಹಿಸಿದ್ದರು.
- ಕರುನಾಡ ಕಂದ ಸುದ್ದಿ




















