ಬಾಗಲಕೋಟೆ : 30ವರ್ಷಗಳ ಸುದೀರ್ಘ ಶಿಕ್ಷಣ ಸೇವೆಯ ಮೂಲಕ ಸಾವಿರಾರು ವಿದ್ಯಾರ್ಥಿಯರ ಬದುಕಿಗೆ ಬೆಳಕಾದ, ತಾಲೂಕಿನ ಬೇವೂರಿನ ಶ್ರೀಮತಿ ಅನ್ನಪೂರ್ಣ ಎಂ. ಮಾಗನೂರ ಮುಖ್ಯ ಗುರುಮಾತೆಯರು ಹೆಚ್.ಪಿ.ಎಸ್. ದೇವಲಾಪೂರ ಸೇವಾ ನಿವೃತ್ತಿ ಸನ್ಮಾನ ಹಾಗೂ ಅಭಿನಂದನಾ ಸಮಾರಂಭ ದಿನಾಂಕ: 24-06-2026 ಬುಧವಾರ ಬೆಳಿಗ್ಗೆ 11 ಘಂಟೆಗೆ ಸ್ಥಳ: ಕೆ.ಜಿ.ಎಸ್. ಶಾಲಾ ಆವರಣ ಬೇವೂರನಲ್ಲಿ ಜರುಗಲಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಪ. ಪೂ. ಗ್ಯಾನಪ್ಪಜ್ಜನವರು, ಬೇವೂರ ವಹಿಸುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಎಸ್ಡಿಎಂಸಿ ಅಧ್ಯಕ್ಷ ರವಿಕುಮಾರ ಬಿ. ತಳವಾರ ವಹಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ, ಬಾಗಲಕೋಟೆಯ ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ಬೇವೂರಿನ ಮಾಜಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಜಿ. ವೈ. ಹೆರಕಲ್ಲ ಧಾರವಾಡ ಸಾವಿತ್ರಿಬಾಯಿ ಪುಲೆ ಸಂಘದ ಗೌರವಾಧ್ಯಕ್ಷೆ ಶ್ರೀಮತಿ ಹೆಚ್. ಟಿ. ಕೊಡ್ಡಣ್ಣವರ ಮುಖ್ಯ ಗುರುಗಳಾದ ಬಿ. ಎಸ್. ಹೊಸಗೌಡರ ಆಗಮಿಸಲಿದ್ದಾರೆ ಕಾರ್ಯಕ್ರಮಕ್ಕೆ ಆಗಮಿಸುವ ಸರ್ವರನ್ನು ಕೆಜಿ ಎಸ್ ಶಾಲೆಯ ಮುಖ್ಯಗುರುಗಳು & ಸಿಬ್ಬಂದಿ ವರ್ಗ, ಎಸ್.ಡಿ.ಎಮ್.ಸಿ ಸರ್ವ ಸದಸ್ಯರು ಮಾಗನೂರ ಪರಿವಾರ ಪ್ರಕಟಣೆಯಲ್ಲಿ ಕೋರಿದ್ದಾರೆ.
- ಕರುನಾಡ ಕಂದ ಸುದ್ದಿ



















