ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಕಲಿ ವೈದ್ಯನ ವಿರುದ್ದ ಕ್ರಮ ಕೈಗೊಳ್ಳದ ಕುಷ್ಟಗಿ ತಾಲ್ಲೂಕ ಆರೋಗ್ಯಾಧಿಕಾರಿ?

ಕೊಪ್ಪಳ/ಕುಷ್ಟಗಿ:ಸಾರ್ವಜನಿಕ ಹಿತಾಸಕ್ತಿ‌ ದೂರನ್ನು ನೀಡಿದ್ದರೂ ಸಹ ಅನಾಮಧೇಯ ನಕಲಿ ವೈದ್ಯ ಪ್ರಶಾಂತ ತಂ.ಹರಿಪದ ದ್ಯಾಮವ್ವ ದೇವಿ ದೇವಸ್ಥಾನ ಹತ್ತಿರ ಸಾ. ಕುಷ್ಟಗಿ ರವರು ದಿ 27-೦7-2024 ರಂದು ನಕಲಿ ವೈದ್ಯ ಮತ್ತೆ ಮನೆಯಲ್ಲಿ ಕ್ಲಿನಿಕ್ ಪ್ರಾರಂಭಮಾಡಿದ್ದಾರೆ.
ಇದರಿಂದ ತಾಲ್ಲೂಕ ಆರೋಗ್ಯ ಅಧಿಕಾರಿಗಳ ನೋಟಿಸ್ ಗೆ ಹಾಗೂ ಯಾರ ಭಯವಿಲ್ಲದೆ ಮನೆ ಕ್ಲಿನಿಕ್ ಪ್ರಾರಂಭಮಾಡಿರುವುದು ಭಾರೀ ಅನುಮಾನವುಂಟುಮಾಡುತ್ತಿದೆ.
ಈ ನಕಲಿ ವೈದ್ಯನಿಂದಾಗಿ ಜನರಿಗೆ ಅಡ್ಡ ಪರಿಣಾಮವಾಗಿ ಸಾವನ್ನಪ್ಪಿದ್ದರೆ ಯಾರು ಜವಾಬ್ದಾರಿ? ಇದರ ಬಗ್ಗೆ ಏಕೆ ಕ್ರಮ ಜರುಗಿಸಲು ಯಾರೂ ಕೂಡಾ ಮುಂದೆ ಬರುತ್ತಿಲ್ಲ? ತಾಲ್ಲೂಕ ಆರೋಗ್ಯ ಅಧಿಕಾರಿಗಳು ಏಕೆ ಹಿಂಜರಿಯುತ್ತಿದ್ದಾರೆ?
ತಕ್ಷಣ ಕ್ಲಿನಿಕ್ ನಕಲಿ ವೈದ್ಯ ಪುನಾರಂಭ ಅದೇ ಸ್ಥಳದಲ್ಲಿ ಮಾಡಿದ್ದಾನೆ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ತಾಲ್ಲೂಕಿನ ನಕಲಿ ಕ್ಲಿನಿಕ್ ದಾಳಿಯ ಸಮಿತಿಯಿಂದ ತಕ್ಷಣ ಕ್ರಿಮಿನಲ್ ಪ್ರಕರಣವನ್ನು ದಾಖಲುಮಾಡಿ ಜನರ ಪ್ರಾಣವನ್ನು ಕಾಪಾಡಬೇಕೆಂದು ವಿನಂತಿಸಿಕೊಳ್ಳುತ್ತೇನೆ,
ತಾಲ್ಲೂಕ ಆರೋಗ್ಯ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದ ಪಕ್ಷದಲ್ಲಿ ಅತೀ ಶೀಘ್ರವಾಗಿ ದಿನಾಂಕವನ್ನು ನಿಗದಿಪಡಿಸಿಕೊಂಡು ಆರೋಗ್ಯಾಧಿಕಾರಿಗಳ ಕಛೇರಿ ಕುಷ್ಟಗಿ ಮುಂಭಾಗ ಮಾನ್ಯ ಜಿಲ್ಲಾ ಆರೋಗ್ಯಾಧಿಕಾರಿಗಳು ಕೊಪ್ಪಳ ರವರು ಖುದ್ದು ಸ್ಥಳಕ್ಕೆ ಬರುವವರೆಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಹೋರಾಟವನ್ನು ಹಮ್ಮಿಕೊಳ್ಳುತ್ತೇನೆ ಎಂದು ಸಾರ್ವಜನಿಕ ಹಿತಾಸಕ್ತಿ ಮನವಿ/ಎಚ್ಚರಿಕೆಯನ್ನು ಸಾಮಾಜಿಕ ಹೋರಾಟಗಾರರಾದ ಶ್ರೀ ಮುತ್ತುರಾಜ‌ ಕಟ್ಟಿಮನಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ