
ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಜಮಾಪುರದಲ್ಲಿ ಆಯುಷ್ ಇಲಾಖೆ ಕೊಪ್ಪಳ ಮತ್ತು ಅಯುಷ್ಮಾನ್ ಆರೋಗ್ಯ ಮಂದಿರ ನಂದಿಹಳ್ಳಿ ವತಿಯಿಂದ ಪಂಚವಟಿ ಸಸಿಗಳು ಮತ್ತು ವರುಣನ ಆಗಮದ ಮಂತ್ರವನ್ನು ತಿಳಿಸುವ ಕಾರ್ಯಕ್ರಮದಲ್ಲಿ ಡಾ. ಪರ್ವತಗೌಡ್ ಬ ಹಿರೇಗೌಡರ್ ಜಿಲ್ಲಾ ಆಯುಷ್ ಅಧಿಕಾರಿಗಳು ಕೊಪ್ಪಳ, ಶಾಲಾ ಆವರಣದಲ್ಲಿ ಪವಿತ್ರ ಪಂಚವಟಿ ಸಸಿಗಳನ್ನು ಇಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಆಯುರ್ವೇದ ಗಿಡಮೂಲಿಕೆಗಳ ದಿವ್ಯ ಔಷಧ ಬಗ್ಗೆ ಮಾತನಾಡಿದರು ಹಾಗೂ ಮಕ್ಕಳಿಗೆ ಆರೋಗ್ಯ ಮತ್ತು ಸುಚಿತ್ವ ದ ಬಗ್ಗೆ ಮಾರ್ಗದರ್ಶನ ಮಾಡಿದರು.
ಡಾ.ಗುರುರಾಜ್ ಉಮಚಗಿ ಆಡಳಿತ ವೈದ್ಯಾಧಿಕಾರಿಗಳು ಸರಕಾರಿ ಆಯುರ್ವೇದ ಆಸ್ಪತ್ರೆ ಗಂಗಾವತಿ ಇವರು ಮಾತನಾಡಿ ಪಂಚವಟಿ ಔಷಧಿ ಸಸ್ಯಗಳ ಮಹತ್ವ ಮತ್ತು ಮಕ್ಕಳ ಆರೋಗ್ಯದ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಇಲಾಖೆಯ ಸೂಪರ್ಡೆಂಟ್ ಶ್ರೀ ಶರತ್ ,ಯೋಗ ತರಬೇತುದರಾದ ಶ್ರೀ ಬಸವರಾಜ ನೀರಗಂಟಿ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಶರಣಪ್ಪ ಮೇಟಿ ಮತ್ತು ನಿಲಯ ಪಾಲಕರಾದ ಶ್ರೀ ಶರಣಪ್ಪ ಸರ್ ಮತ್ತು ಶಾಲಾ ಗುರು ಬಳಗದವರು ಮತ್ತು ಶಾಲಾ ಸಿಬ್ಬಂದಿ ವರ್ಗದವರು ಮತ್ತು ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಯೋಗಾಸನ ಮಾಡಿದಂತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು.
- ಕರುನಾಡ ಕಂದ ಸುದ್ದಿ



















