
ಹರಪನಹಳ್ಳಿ : NCC ವಿದ್ಯಾರ್ಥಿಗಳಿಂದ ಹರ-ಘರ್ ತಿರಂಗ ಯಾತ್ರೆಯು ಕಾಲೇಜಿನ ಮುಖ್ಯ ದ್ವಾರದಿಂದ ಕಾಲ್ನಡಿಗೆಯ ಜಾಥಾಕ್ಕೆ ಕಾಲೇಜಿನ ಪ್ರಾಚಾರ್ಯರಾದ ಡಾ. ಸಿದ್ದಲಿಂಗ ಮೂರ್ತಿ ಹಾಗೂ NCC ಅಧಿಕಾರಿಗಳಾದ ಲೆಫ್ಟಿನೆಂಟ್ ಡಾ.ಬಸಲಿಂಗಪ್ಪ ಕಲ್ಮನಿ ರವರು 200 ವಿದ್ಯಾರ್ಥಿಗಳೊಂದಿಗೆ ಚಾಲನೆ ನೀಡಿದರು.
ಈ ಜಾಥಾವು ಹರಪನಹಳ್ಳಿಯ ಪ್ರಮುಖ ನಗರಗಳ ಬೀದಿಯ ಮೂಲಕ ನಗರದ ಪ್ರಮುಖ ವೃತ್ತವಾದ ಐ.ಬಿ ಸರ್ಕಲ್ ವೃತ್ತದಲ್ಲಿ ಸಾರ್ವಜನಿಕರಿಗೆ ಹರ್-ಘರ್ ತಿರಂಗ ಯಾತ್ರೆಯ ಉದ್ದೇಶ ಹಾಗೂ ತತ್ವಗಳನ್ನು Nss ಅಧಿಕಾರಿಯಾದ ಡಾ. ಅಣ್ಣೇಶ್ ರವರು ಹಂಚಿಕೊಂಡರು.
ಈ ಜಾಗೃತ ಸಭೆಯಲ್ಲಿ ಇಂಗ್ಲಿಷ್ ಉಪನ್ಯಾಸಕರಾದ ಶಿವಕುಮಾರ್ ಬಾಗಳಿ ಯವರು ದೇಶದ ಐಕ್ಯತೆ ಹಾಗೂ ಸ್ವಾತಂತ್ರ್ಯದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಈ ಜಾಥಾದಲ್ಲಿ ಪ್ರಾಧ್ಯಾಪಕರುಗಳಾದ ಡಾ. ರವಿನಾಯಕ್, ಡಾ,ಗೋವರ್ಧನ್, ದೈಹಿಕ ಶಿಕ್ಷಣ ನಿರ್ದೇಶಕರಾದ ನವಾಜ್ ಭಾಷ್, ಡಾ. ಮಧು ಕುಮಾರ್ , ಕೆ ಗಂಗಪ್ಪ, ಜಗದೀಶ್,ಮಮತಾ, ಎನ್ ಎನ್ ಪಾಟೀಲ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಪೊಲೀಸ್ ಇಲಾಖೆಯ ರಕ್ಷಣೆಯೊಂದಿಗೆ ಈ ಜಾಥಾ ಯಶಸ್ವಿಯಾಯಿತು.
- ಕರುನಾಡ ಕಂದ ಸುದ್ದಿ




















