ಸರ್ಕಾರಿ ಶಾಲಾ ಮಕ್ಕಳಿಗೆ ಜೋಗತಿ ರಾಜಮ್ಮರವರಿಂದ ಉಚಿತ ಸಮವಸ್ತ್ರ ವಿತರಣೆ
ಬಳ್ಳಾರಿ / ಕಂಪ್ಲಿ : ತಾಲೂಕಿನ ಮೆಟ್ರಿ ಗ್ರಾ. ಪಂ. ಯ ಜಿನ್ನಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜೋಗತಿ ರಾಜಮ್ಮ ಸುಗ್ಗನಹಳ್ಳಿ ಇವರು ಸ್ವಂತ ಖರ್ಚಿನಿಂದಾಗಿ ಶಾಲಾ ಮಕ್ಕಳಿಗೆ ಸಮವಸ್ತ್ರಗಳನ್ನು ಗುರುವಾರ ವಿತರಿಸಿದರು.
ನಂತರ ಮುಖ್ಯಗುರು ಇ.ಜಡೆಪ್ಪ ಮಾತನಾಡಿ, ಶಾಲೆಯಲ್ಲಿ ಪ್ರಸ್ತುತವಾಗಿ 27 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇಲ್ಲಿನ ಬಡು ಬಡತನದಲ್ಲಿ ಜೀವನ ನಡೆಸುವ ಸರ್ಕಾರಿ ಶಾಲೆಯ ಮಕ್ಕಳಿಗೆ ಜೋಗತಿ ರಾಜಮ್ಮ ಇವರು ಉಚಿತವಾಗಿ ಸಮವಸ್ತ್ರಗಳನ್ನು ವಿತರಿಸಿದ್ದು, ಈ ಸಮವಸ್ತ್ರ ಸದುಪಯೋಗದೊಂದಿಗೆ ಮಕ್ಕಳಿಗೆ ಶಿಕ್ಷಣವಂತರಾಗಬೇಕು ಎಂದರು.
ನಂತರ ಜೋಗತಿ ರಾಜಮ್ಮ ಮಾತನಾಡಿ, ಪ್ರತಿ ವರ್ಷ ನಾನು ದುಡಿದಿರುವ ಹಣದಿಂದ ಸ್ವಲ್ಪನಾದರೂ ಶಾಲೆ ಮಕ್ಕಳಿಗೆ ದಾನ ಧರ್ಮ ಮಾಡುತ್ತೇನೆ. ಈ ಮಕ್ಕಳೇ ನನ್ನ ಮಕ್ಕಳೆಂದು ಭಾವಿಸಿದ್ದೇನೆ ಎಂದು ಹೇಳಿದರು,
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಎಂ.ರಮೇಶ್ ಬಾಬು, ಮುಖಂಡರಾದ ಕೆ.ಗಣೇಶ, ಮಲ್ಲಿಕಾರ್ಜುನ, ಕೊಂಡಪ್ಪ, ಪಿ.ತಾರಾಸಾಬ್, ಜಯರಾಮುಲು, ಪಿ.ರಾಜು, ಹೊನ್ನೂರ, ಅತಿಥಿ ಶಿಕ್ಷಕರಾದ ಉಮೇಶ ಮತ್ತು ಅಡುಗೆ ಸಿಬ್ಬಂದಿಗಳಾದ ರತ್ನಮ್ಮ, ಬುಡ್ಡಮ್ಮ ಸೇರಿದಂತೆ ಮಕ್ಕಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















