ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವನಸಿರಿ ಫೌಂಡೇಶನ್ ಕಾರ್ಯ ಶ್ಲಾಘನೀಯ:ಬಸವರಾಜ ವಿಶ್ವಕರ್ಮ

ಮಸ್ಕಿ ತಾಲೂಕಿನ ಬಳಗಾನೂರ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ವನಸಿರಿ ಫೌಂಡೇಶನ್ ತಾಲೂಕ ಘಟಕ ಮಸ್ಕಿ ವತಿಯಿಂದ ಯುಗಾದಿ ಹಬ್ಬ ಹಾಗೂ ಪ್ರಕೃತಿ ಮಾತೆ ಚಿಗುರೊಡೆಯುವ ಚೈತ್ರಮಾಸದ ಮೊದಲ ದಿನ ಅಂಗವಾಗಿ 101 ಹಣ್ಣಿನ ಸಸಿಗಳ ವಿತರಣೆ ಮಾಡುವ ಮೂಲಕ ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಪ್ರಕೃತಿಯ ಮಹತ್ವ ಹಾಗೂ ಪರಿಸರ ಜಾಗೃತಿ ಮೂಡಿಸಲಾಯಿತು.

ಇದೇ ಸಂದರ್ಭದಲ್ಲಿ ಶ್ರೀ ಕಾಳಿಕಾದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಯಿತು.

ಸಸಿಗಳ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಬಸವರಾಜ ಸಾಲ್ವಾಡಗಿ ವಿಶ್ವಕರ್ಮ ಮಾತನಾಡಿ ಮಸ್ಕಿ ತಾಲೂಕ ವನಸಿರಿ ಫೌಂಡೇಶನ್ ವತಿಯಿಂದ ಮಸ್ಕಿ ತಾಲೂಕ ಅದ್ಯಕ್ಷರಾದ ರಾಜು ಪತ್ತಾರ ಬಳಗಾನೂರು ಅವರು ಬಳಗಾನೂರಿನಲ್ಲಿ ಮತ್ತು ತಾಲೂಕಿನ ವಿವಿಧ ಸ್ಥಳಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆದರೆ ತಾವು ಕೂಡಾ ಭಾಗವಹಿಸಿ ಗಿಡಗಳನ್ನು ಕೊಡುವುದರ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿರುವ ಒಂದು ಪರಿಪಾಠವನ್ನು ಬಹಳ ಅತ್ಯುತ್ತಮವಾಗಿ ನಿಭಾಯಿಸಿಕೊಂಡು ಹೊರಟಿದ್ದಾರೆ.ಇವತ್ತಿನ ದಿನಗಳಲ್ಲಿ ಅದು ಅವಶ್ಯವಾಗಿದೆ.ಯಾಕೆಂದರೆ ಇವತ್ತು ಮೂಕ ಪ್ರಾಣಿಗಳು ಪ್ರಕೃತಿಯನ್ನು ಹಾಳುಮಾಡುತ್ತಿಲ್ಲ, ಬುದ್ದಿವಂತರಾದ ನಾವುಗಳೇ ಪ್ರಕೃತಿಯನ್ನು ಹಾಳುಮಾಡುತ್ತಿದ್ದೇವೆ.ಅಂದರೆ ಗಿಡಗಳನ್ನು ಹಚ್ಚುವುದಕ್ಕಿಂತ ಇದ್ದ ಕಡಿಯುತ್ತಿದ್ದೇವೆ,ಇದರಿಂದ ನಮ್ಮ ರಾಯಚೂರು ಜಿಲ್ಲೆಯಲ್ಲಿ ಪ್ರತಿವರ್ಷ 40 ರಿಂದ 42 ಡಿಗ್ರಿ ಸೆಲ್ಸಿಯಸ್ ಇರುವ ಬಿಸಿಲಿನ ತಾಪಮಾನ ಈಗ ಎಪ್ರೀಲ್ ಎರಡನೇ ವಾರದಿಂದಲೇ 45ಡಿಗ್ರಿಗಿಂತ ಹೆಚ್ಚಿನ ತಾಪಮಾನವನ್ನು ನೋಡುತ್ತಿದ್ದೇವೆ.ಇದಕ್ಕೆ ಕಾರಣ ಗಿಡಗಳು ಇಲ್ಲದಿರುವುದು. ಇದರಿಂದಾಗಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ನಮ್ಮ ಪೂರ್ವಜರ ಕಾಲದಲ್ಲಿ ಯುಗಾದಿ ಹಬ್ಬದಂದೆ ಮಳೆ ಶುರುವಾಗುತ್ತಿತ್ತು.ಈ ವರ್ಷ ಯುಗಾದಿ ಹಬ್ಬ ಬಂದರೂ ಮಳೆಗಾಲ ಇನ್ನೂ ಶುರುವಾಗಿಲ್ಲ ಇಂತಹ ಒಂದು ಸಂಕಷ್ಟದ ಸಮಯದಲ್ಲಿ ರಾಜು ಪತ್ತಾರ ಅವರು ಗಿಡಗಳನ್ನು ವಿತರಣೆ ಮಾಡಿ ಪರಿಸರ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ.ಇವರು ನೀಡಿದ ಗಿಡಗಳನ್ನು ಪ್ರತಿಯೊಬ್ಬರೂ ನೀಡಬೇಕು ನೆಟ್ಟ ಸಸಿಗಳನ್ನು ಪೋಷಣೆ ಮಾಬೇಕು.‌ ದಯವಿಟ್ಟು ಗಿಡಗಳನ್ನು ಉಳಿಸಿ ಬೆಳಸಲು ಮುಂದಾಗಬೇಕು. ದೇವರು ಕಾಳಿಕಾಮಾತೆ ರಾಜು ಪತ್ತಾರ ಅವರಿಗೆ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ರಾಜ್ಯಾದ್ಯಂತ ಪ್ರಕೃತಿ ಮಾತೆಯ ಸೇವೆ ಮಾಡುವಂತೆ ಶಕ್ತಿ ನೀಡುವಂತಾಗಲಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ತಾಲೂಕ ಅಧ್ಯಕ್ಷರಾದ ರಾಜು ಪತ್ತಾರ ಬಳಗಾನೂರ, ಬಸವರಾಜ ಸಾಲ್ವಡ್ಗಿ,ರಾಘವೇಂದ್ರ ಕುಲಕರ್ಣಿ,ಶೇಖರಪ್ಪ,ಪ್ರಬಣ್ಣ ಕಂಬಾರ,ವೀರೇಶ ಬಡಿಗೇರ ಅಮರೇಶ,ಗಣೇಶ ಸುಲ್ತಾನಾಪುರ, ಪ್ರಕಾಶ ಸುಲ್ತಾಪೂರ ಹಾಗೂ ವನಸಿರಿ ಫೌಂಡೇಶನ್ ಪದಾಧಿಕಾರಿಗಳು ವಿಶ್ವಕರ್ಮ ಸಮಾಜದ ಬಂದುಗಳು, ಗ್ರಾಮದ ಹಿರಿಯರು,ಯುವಕರು, ಮಹಿಳೆಯರು ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ