ಮಾನ್ವಿ : ತಾಲ್ಲೂಕಿನ ದದ್ದಲ್ ಗ್ರಾಮದಲ್ಲಿ ಮೊಹರಂ ಹಬ್ಬದ ಅಂಗವಾಗಿ ಮೌಲಾಲಿ ತಾತನವರ ನೇತೃತ್ವದಲ್ಲಿ ಸದ್ಗುರು ಮೌಲಾಲಿ ಪೀರಾ ಅವರ ಮೂರನೇ ದಿನದ ಸವಾರಿ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನಡೆಯಿತು. ಗ್ರಾಮದ ಮಸೀದಿಯಲ್ಲಿ ಮೌಲಾಲಿ ಅಲಿ ಅವರ ಪಂಜಾವನ್ನು ಪ್ರತಿ ಷ್ಠಾಪಿಸಲಾಗಿದ್ದು ಇಂದು ಬೆಳಗಿನ ಜಾವ ಬಾಬು ತಾತನವರು ಮೂರುನೇ ದಿನದ ಸವಾರಿ ನಡೆಸಿ ಭಕ್ತರಿಗೆ ಆಶೀರ್ವಚನ ನೀಡಿದರು. ನಾಡಿನಲ್ಲಿ ಮಳೆ- ಬೆಳೆ ಸಮೃದ್ಧಿಯಾಗಲಿದೆ ಎಂದು ಹೇಳಿಕೆ ನೀಡಿದರು ನಂತರ ಮೌಲಾಲಿ ಅಲಿ ದೇವರ ಸವಾರಿ ಹೊರಟು ಗ್ರಾಮದಲ್ಲಿನ ಮಸೀದಿ ದರ್ಗಾದಿಂದ ದೇವಸ್ಥಾನಗಳಿಗೆ ತೆರಳಿ ಪೂಜೆ ನಡೆಸಲಾಯಿತು. ದೇವರ ಮೆರವಣಿಗೆಯುದ್ದಕ್ಕೂ ಭಕ್ತರು ಸಕ್ಕರೆ ಮಾದಲಿ ನೀಡಿ ಭಕ್ತಿ ಸಮರ್ಪಿಸಿದರು. ಸವಾರಿ ಕಾರ್ಯಕ್ರಮ ವೀಕ್ಷಿಸಲು ಗ್ರಾಮದ ಸಾರ್ವಜನಿಕರು ತಂಡೋಪತಂಡವಾಗಿ ಬಂದಿದ್ದರು ಸವಾರಿ ಹಿಂದಿನ ಮಂಗಳವಾರ ವಿವಿಧ ಧಾರ್ಮಿಕ ವಿಧಿ – ವಿಧಾನಗಳು ಜರುಗಿದವು ಈ ಸಂದರ್ಭದಲ್ಲಿ ಈರಪ್ಪ ತಾತ ದದ್ದಲ್ ಮೌಲಾಲಿ ತಾತ ಕಾತರಕಿ ಕಾಶಿಂ ಕಾತರಕಿ ಈರಪ್ಪ ಪೂಜಾರಿ ಕಲ್ಲಪ್ಪ ತಳವಾರ ರಾಮ ಮೊಟ್ಲು ಹನುಮಂತ ಕಾವಲಿ ನಾಗರಾಜ್ ಹನಮಂತ್ರಯ ಅಂಜಿ ಮದ್ರಿ ಹಾಗೂ ಊರಿನ ಹಿರಿಯ ಗುರು ಹಿರಿಯರು ಮುಖಂಡರುಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
- ಕರುನಾಡ ಕಂದ ಸುದ್ದಿ



















