
ಕುಶಾಲನಗರ: ರೈತ ಸಹಕಾರ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ಶರಣ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ೧೨ನೇ ಶತಮಾನದ ಕ್ರಾಂತಿಕಾರಿ ಬಸವಣ್ಣ ಎಲ್ಲರನ್ನು ಸಮಾನರಾಗಿ ಕಂಡಿದ್ದರು. ಅವರು ಹಾಕಿಕೊಟ್ಟ ದಾರಿಯಲ್ಲೇ ಎಲ್ಲರೂ ನಡೆಯಬೇಕು. ಶರಣರು ಇದ್ದಲ್ಲಿ ಸಂಸ್ಕಾರ ಇರುತ್ತದೆ. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂಬ ಪ್ರಾಸ್ಥಾವಿಕ ನುಡಿಗಳನ್ನಾಡಿದರು.
ನಂತರ ಶಾಸಕ ಡಾ. ಮಂತರ್ ಗೌಡ ಮಾತನಾಡಿ ೧೨ನೇ ಶತಮಾನದಲ್ಲಿ ರಚನೆಯಾದ ವಚನಗಳು ಇಂದಿನ ಶತಮಾನಕ್ಕೆ ಎಷ್ಟು ತಲುಪಿದೆ ಎನ್ನುದನ್ನು ಚಿಂತಿಸಬೇಕಾಗಿದೆ .ಮಹಿಳಾ ಸಮಾನತೆಯ ಬಗ್ಗೆ ಮಾತನಾಡುವ ಮೊದಲು ಇದು ನಮ್ಮ ನಮ್ಮ ಮನೆಗಳಿಂದ ಶುರುವಾಗಬೇಕು.
ಅಖಿಲ ಭಾರತ ವೀರಶೈವ ಮಹಾಸಭಾದ ಉದ್ದೇಶಿತ ಸಮುದಾಯ ಭವನಕ್ಕೆ ಸರ್ಕಾರದ ವತಿಯಿಂದ ೫೦ಲಕ್ಷ ಕೊಡಿಸಲಾಗುವುದು ಮತ್ತು ಮಹಾಸಭದಿಂದ ೫೦ಲಕ್ಷ ನೀಡಲಾಗುದು ಉಳಿದಂತೆ ದಾನಿಗಳಿಂದ ಭವನದ ನಿರ್ಮಾಣವಾಗಲಿ ದೊಡ್ಡ ಕಟ್ಟಡಗಳನ್ನು ಕಟ್ಟುವುದು ಮುಖ್ಯವಲ್ಲ , ಅವುಗಳ ಉದ್ದೇಶ ಮುಖ್ಯ ಸಮುದಾಯದ ಅಭಿವೃದ್ಧಿಗೆ ಕಾರಣೀಭೂತರಾಗಬೇಕೆಂದು ಮನವಿ ಮಾಡಿದರು.
ವರದಿ : ಪ್ರಿತುನ್ ಪೂವಣ್ಣ ಅಯ್ಯನೆರವಂಡ



















