
ಶುಭ ಮುಂಜಾವು
ಹಲ್ಲುಜೋಳದ ನೂಲುಗಳ ಕಟ್ಟೆಯಲಿ ಹರಡಿಕಾಳುಗಳ ಜೋಡಿಸಲು ಗರಿಗಳಾ ಜೋಡಿಆಚೀಚೆಯಲಿ ಹಸಿರ ತೆನೆಗಳು ಜೋತಾಡಿಸಂಜೆಮಲ್ಲಿಗೆ ಕುಡಿಗಳಲಿ ಐಸಿರಿಯ ಮೋಡಿ ತುಂಬೆ ಹೂಗಳ ಜೋಡಣೆಯಲಿನ ಪುಷ್ಪವುಕತ್ತರಿಸಿದ ಕೆಂಪು ದಾಸವಾಳಗಳಲಿ ಕುಸುಮವುಶಿರದಿ ಮೂಡಿತೊಂದು ಪ್ರಭಾವಳಿಯ ಸ್ವರೂಪವುಶುಭ ಮುಂಜಾವಲಿ ಅರಳಿತು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹಲ್ಲುಜೋಳದ ನೂಲುಗಳ ಕಟ್ಟೆಯಲಿ ಹರಡಿಕಾಳುಗಳ ಜೋಡಿಸಲು ಗರಿಗಳಾ ಜೋಡಿಆಚೀಚೆಯಲಿ ಹಸಿರ ತೆನೆಗಳು ಜೋತಾಡಿಸಂಜೆಮಲ್ಲಿಗೆ ಕುಡಿಗಳಲಿ ಐಸಿರಿಯ ಮೋಡಿ ತುಂಬೆ ಹೂಗಳ ಜೋಡಣೆಯಲಿನ ಪುಷ್ಪವುಕತ್ತರಿಸಿದ ಕೆಂಪು ದಾಸವಾಳಗಳಲಿ ಕುಸುಮವುಶಿರದಿ ಮೂಡಿತೊಂದು ಪ್ರಭಾವಳಿಯ ಸ್ವರೂಪವುಶುಭ ಮುಂಜಾವಲಿ ಅರಳಿತು

ತೆಂಗಿನ ಜುಟ್ಟನು ನಡುವಲಿ ಜೋಡಿಸಿಎಲೆಕೋಸಿನ ದಿಂಡನು ಅಡಿಯಲಿ ಇರಿಸಿಗೋಲಾಕಾರದ ಮೂಲಂಗಿ ಬಿಲ್ಲೆಗಳ ಹಾಸಿಕ್ಯಾರೆಟ್ ತುಂಡುಗಳ ಅಲ್ಲಲ್ಲಿ ಸೇರಿಸಿ ನೋಡಲು ಮೂಡಿತ್ತು ಸುಲಲಿತ ಚಿತ್ತಾರವುಪದಪುಂಜಗಳ ಸೇರಿಸಲು ಲಘು ಕಾವ್ಯವುನಲ್ಮನಗಳಲಿ ಹಂಚಿಕೊಳಲು ನವೋಲ್ಲಾಸವುಸುಪ್ರಭಾತದಲಿ ಸಂಭ್ರಮಿಸಲು ಮನಕಾನಂದವು

ಕಿತ್ತಳೆ ಸಿಪ್ಪೆಯಲಿ ಜೋಡಿಸಿದ ಹೆಣಿಗೆಗಳುಶೋಭಾಚಾರದ ಚಿಗುರಿನ ಗರಿ ಗರಿ ಎಲೆಗಳುಜೋಡಿಸಲು ಮೂಡಿರುವ ಸುಲಲಿತ ಕಾವ್ಯದಾ ಸಾಲುಗಳು ದಿನವೂ ಮುಂಜಾನಿನಲಿ ಕಾತುರದಿ ಕಾಯುತಿರುವಸುಮನಗಳ ಬಳಿಗೆ ರವಾನಿಸಲು ಸಿದ್ಧ ಮಾಡಿರುವಇಂದಿನ ಚಿತ್ತಾರಕೆ ಶುಭ ಕೋರಲು ಎಲ್ಲರೂ ಮುಂದಾಗುವ

ಮುಗಿಲೆತ್ತರದ ಮರದಡಿಯ ಸುತ್ತ ಉದುರಿದ್ದ ಪಕಳೆಗಳುಉದ್ದುದ್ದ ತೊಟ್ಟುಗಳ ಶ್ವೇತ ವರ್ಣದ ಪುಷ್ಪಗಳುಜೊತೆಯಲಿ ನಡುವಿಗೆ ಜೋಡಿಸಲುವೀಳೆದೆಲೆಗಳುಮೂರೂ ದಿಕ್ಕುಗಳಲಿ ಇರಿಸಲು ಹಸಿರೆಲೆ ಕುಡಿಗಳು ಕೆಂಪು ಗುಲಾಬಿ ದಳಗಳನು ಅಲ್ಲಲ್ಲಿ ಸಿಂಗರಿಸಲುಅರುಣರಾಗದಿ ಮೂಡಿತು ಸುಲಲಿತ ಚಿತ್ತಾರದ ಹೊನಲುಅಕ್ಷರಗಳ ಪೋಣಿಸಲು

ಓಣಂ ಹಬ್ಬದ ಹಾರ್ಧಿಕ ಶುಭಾಶಯಗಳು ರಾಜ ಮಹಾಬಲಿ ವರ್ಷಕ್ಕೊಮ್ಮೆ ಭೂಲೋಕಕೆ ಬರುವ ದಿನಕೇರಳರಾಜ್ಯ ಜನತೆಯ ಪುಳಕಿತ ಸಂಭ್ರಮದ ಸುಗ್ಗಿಯ ಸುದಿನಪೂಕ್ಕಳಂ ಪುಷ್ಪರಂಗೋಲಿ ಬಿಡಿಸೀ ಸಂಭ್ರಮಿಸುವ ಸುದಿನಅದುವೇ ವಿಷೇಷ ಹರ್ಷೋತ್ಸವದ ಓಣಂ ಹಬ್ಬದ ಸುದಿನ ಸುಪ್ರಭಾತದಿ

ಚಿಗುರು ಗರಿಎಲೆ ಅಲ್ಲಲ್ಲಿ ಹರಡಿತ್ತು ಭುವಿಯಲಿಅರಳಿತ್ತೆರಡು ನೇತ್ರಗಳು ತುಸು ಅನುಕಂಪದಲಿಎಚ್ಚರಿಸಿತು ಸೃಜನಶೀಲ ಜಾಗೃತಿ ಆಂತರ್ಯದಲಿಪ್ರೇರೇಪಿಸಿತೆನ್ನ ಚಿತ್ತ ಪರಿಚಯಿಸಲು ಚಿತ್ತಾರದಲಿ ಮುಂಜಾವಿನ ಪಾನಕಕೆ ಬೀಟ್ರೂಟನು ತುರಿಯಲುಗೋಲಾಕಾರದಿ ಗರಿಗಳ ಜೊತೆಯಲಿ ಸೇರಿಸಲುಹಲ್ಲುಜೋಳ ಕಲ್ಲಂಡಿಸಿಪ್ಪೆ ಹೂಗಳಲಿ ಸಿಂಗರಿಸಲುರೂಪುಗೊಂಡಿರುವ ನವ್ಯಕಾವ್ಯ

ನೆಲದಲಿ ಹರಡಿದ ದಳಗಳ ಆರಿಸಿದೆಕ್ರಿಯಾಶೀಲ ವೃತ್ತವನು ತಯಾರಿಸಿದೆಮೂಸಂಬಿ ಸಿಪ್ಪೆಯನು ನಡುವಲಿರಿಸಿದೆಸುತ್ತಲೂ ಅವರೆ ಬೀಜಗಳ ಜೋಡಿಸಿದೆ ವರ್ಣಮಾಲೆಯಲಿ ಅಕ್ಷರಗಳ ಹೆಕ್ಕಿದೆಪದಗಳ ಜೋಡಿಸಿ ವಾಕ್ಯಗಳ ಮಾಡಿದೆಓದುತ ಓದುತ ಕಾವ್ಯವ ಹೆಣೆದೆಸುಪ್ರಭಾತವ ತಿಳಿಸಲು ಸುಲಲಿತ ಚಿತ್ತಾರದೆ

ತಂಗಾಳಿಯಲಿ ತೂಗುತಲಿ ಬಳುಕುತಲಿತ್ತು ತೆನೆಗಳುಪಕ್ಕದಲಿ ಓಲಾಡುತಲಿತ್ತು ಕೆಂಪು ದಾಸವಾಳಗಳುಚಿತ್ತಾರ ಮಾಡೆನುತಲಿತ್ತು ಸೃಜನಶೀಲ ಚಿಂತನೆಗಳುಆರಂಭಿಸೀಗಲೆ ಎನುತಲಿತ್ತು ಕ್ರಿಯಾಶೀಲಭಾವಗಳು ಆಣತಿಯಂತೆ ಜೋಡಿಸಲು ನಿತ್ಯದ ಕಟ್ಟೆಯಲಿಮೂಡಿಯೆಬಿಟ್ಟಿತು ಲಘು ಕಾವ್ಯದ ಜೊತೆಯಲಿಬರುತಲಿದೆ ಸುಮನಗಳಿಗೀಗ ಭಾವ ಲಹರಿಯಲಿಆಸ್ವಾದಿಸುತ ಸಾಗುವ ನಾವೆಲ್ಲರೀಗ ಹುಮ್ಮಸ್ಸಿನಲಿ

೧. ಭಾರತ. ಜಾತಿ ಜಂಜಡದಿಂದಜರ್ಜರಿತವಾಗುತ್ತಿರುವಜನಭರಿತ, ದೇಶ ಭಾರತ! ೨. (ಅ)ಸಮಾನತೆ.ಇವ ನಮ್ಮವ,ಇವ ನಮ್ಮವ, ಎಂದರು,ಬಸವಾದಿ ಪ್ರಮಥರು,ಇವನಾರವ, ಇವನಾರವಎನ್ನುತಿರುವರು ಆಧುನಿಕರು! ೩. ಕಟ್ಟೋಣ.ಕಟ್ಟುವುದು ಬೇಡ ಅಲ್ಲಿಮಸೀದಿ, ಮಂದಿರ,ಕಟ್ಟೋಣ ನಾವಿಲ್ಲಿಮನೋ ಮಂದಿರ,ಆದೀತು ಆಗ ಈ ಜಗಸುಂದರ. ೪.

ಹೂ ಕುಂಡದಿ ಬೇಡದ ಗಿಡವೊಂದು ಉದಯಿಸಿತ್ತುವಿಲೇವಾರಿ ಮಾಡಲು ಮನದಲಿ ನೋವಿತ್ತುಸುಲಲಿತ ತೋಟದಿ ಬಿಂಬಿಸಬೇಕೆನಿಸಿತ್ತುಕ್ರಿಯಾಶೀಲ ಚಿಂತನೆಯೊಂದು ಹೊಳೆದಿತ್ತು ಪುಟ್ಟ ಹಣ್ಣುಗಳ ಜೊತೆಯಲಿ ಜೋಡಿಸಿಕರ್ಬೂಜ ಹಣ್ಣಿನ ಬೀಜಗಳಲಿ ಅಲಂಕರಿಸಿಅರಳಿದ ಚಿತ್ತಾರದ ಸೊಬಗ ಕಾವ್ಯದಿ ಬಣ್ಣಿಸಿರವಾನಿಸುತಿರುವೆ ಶುಭ ಮುಂಜಾವಲಿ
Website Design and Development By ❤ Serverhug Web Solutions