
ಶುಭ ಮುಂಜಾವು
ಮುಂಜಾವಲಿ ಕಂಡೆನೆರೆಡು ಮುದುಡಿದ ಬ್ರಹ್ಮಕಮಲಜೊತೆಯಲಿ ಸೊರಗಿದ್ದ ಮೂಲಂಗಿ ದಂಟಿನ ಘಮಲ ಸೇರಿಸಲು ಪುಟ್ಟ ತುಂಬೆಹೂಗಳ ಸಿಂಗಾರದಲಿಮೂಡಿತು ವೈಭವದ ನವಚೈತನ್ಯ ಪಕಳೆಗಳಲಿ ತುಂಬಿತು ಪುನಃಚೇತನ ಸುಲಲಿತ ಚಿತ್ತಾರದಲಿಬಣ್ಣನೆಯ ಉಗಮವಾಯ್ತು ಕಾವ್ಯ ರೂಪದಲಿ ಬರುತಿದೆ ಸಂತಸದಿ ಸುಮನಗಳ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮುಂಜಾವಲಿ ಕಂಡೆನೆರೆಡು ಮುದುಡಿದ ಬ್ರಹ್ಮಕಮಲಜೊತೆಯಲಿ ಸೊರಗಿದ್ದ ಮೂಲಂಗಿ ದಂಟಿನ ಘಮಲ ಸೇರಿಸಲು ಪುಟ್ಟ ತುಂಬೆಹೂಗಳ ಸಿಂಗಾರದಲಿಮೂಡಿತು ವೈಭವದ ನವಚೈತನ್ಯ ಪಕಳೆಗಳಲಿ ತುಂಬಿತು ಪುನಃಚೇತನ ಸುಲಲಿತ ಚಿತ್ತಾರದಲಿಬಣ್ಣನೆಯ ಉಗಮವಾಯ್ತು ಕಾವ್ಯ ರೂಪದಲಿ ಬರುತಿದೆ ಸಂತಸದಿ ಸುಮನಗಳ

ಹಿಮಾಲಯದ ದೈವಿಕ ಪುಷ್ಪಗಳುಸೌಸುರಿಯ ಬಬ್ವಲ್ಲಟಾ ನಾಮಾಂಕನಗಳುಸೂರ್ಯಕಾಂತಿ ಹೂವಿನ ಕುಟುಂಬ ವರ್ಗಗಳುಮನೆಯಂಗಳದಿ ಶೋಭಿಸುತಿರುವ ಬ್ರಹ್ಮಕಮಲದ ಹೂಗಳು ಎಲೆಗಳಲಿ ಮೂಡುವ ವಿಭಿನ್ನ ಹೂವುರಾತ್ರಿ ಅರಳಿ ಹಗಲು ಮುದುಡುವ ಹೂವುಘಮ ಘಮಿಸುವ ರಾತ್ರಿರಾಣಿ ಹೂವುವರ್ಷಕ್ಕೊಮ್ಮೆ ದರುಶನ ಕೊಡುವ ಹೂವು

ಅಂದದ ಆರಕ್ತ ರಂಗಿನ ದಾಳಿಂಬೆ ಹಣ್ಣಿನ ತೊಗಟೆಸೃಜನಶೀಲತೆಯಲಿ ಕತ್ತರಿಸಿ ಜೋಡಿಸಲು ಹೊರಟೆ ಮೂಡಿಹುದು ಸುಲಲಿತ ಚಿತ್ತಾರ ಕಾಳುಗಳ ಜೊತೆಯಲ್ಲಿಓದುಗ ಮನಗಳಿಗೆ ಕಾವ್ಯೋದಯ ಆಗಿಹುದಿಲ್ಲಿ ಅರುಣೋದಯದಿ ಬರುತಿದೆ ಮೆಲ್ಲ ಮೆಲ್ಲಗೆನವ್ಯತೆಯ ಚೈತನ್ಯವ ತುಂಬಲು ಸುಮನಗಳಲ್ಲಿಗೆ

ಗಂಗೆಯುಟ್ಟ ಶುಭ್ರ ಶ್ವೇತವಸ್ತ್ರ ಎಲ್ಲೆಡೆಬೆಳ್ಳಿ ಮೋಡವಾಗಿಗಗನ ವಿಹಾರಿ ಗಂಗೆಯ ಕಾಲ್ಗೆಜ್ಜೆಯಛನ್ ಛನ್ ನಿನಾದವಾಗಿಧವಲಗಿರಿಗಳ ಮೇಲೆ ಕಪ್ಪುಕೇಶರಾಶಿಕಾರ್ಮೋಡಗಳಾಗಿಸೂರ್ಯನ ಕಣ್ಣಂಚಿನ ಕೋಲ್ಮಿಂಚಾಗಿಮಳೆಗರೆವೆ ಭುವಿಗಾಗಿ|| ಬೆಳ್ಳಿ ಮೋಡವೇ ಬಾನಿನ ಬೆಳ್ಳಿಯಕನಸು ನೀನುಭುವಿಯ ಬಾಯಾರಿಕೆಗೆ ಭರವಸೆಯನನಸು ನೀನುಬಿಸಿಲ ಬೇಗೆಯಲ್ಲಿ ಬಳಲಿದ
ಅವಿವೇಕ ಅಜ್ಞಾನಗಳದೂರ ಸರಿಸಯ್ಯ,ವಿವೇಕ ಸುಜ್ಞಾಗಳನನ್ನೊಳಿರಿಸಯ್ಯ, ಕತ್ತಲೆಯೇತುಂಬಿದೆ, ಈ ಬಾಳು,ಬೆಳಕಿಗಾಗಿ ಹಂಬಲಿಸಿದೆ ಎನ್ನಮನ, ಬೆಳಕ ತೋರಿಮುನ್ನಡೆಸೆಂದ ಶಿವ ಶಿವಾ! ಹೇ ಹುಲು ಮಾನವ,ನಾ ಅವರಂತಾಗಲಿಲ್ಲ,ನಾ ಇವರಂತಾಗಲಿಲ್ಲ,ಎಂಬ ಕೊರಗಿನಲಿಸೊರಗಿ ಹೋಗುವ ಮುನ್ನನಿನ್ನಂತೆ ನೀನಾಗಿ ಹೋಗೆಂದಶಿವ ಶಿವಾ!

ಮಧುಮಕ್ಕಳಿಗೆ ಶುಭ ಕೋರಿದ ಪುಷ್ಪಗುಚ್ಛವೊಂದುಕೈಸೇರಿತು ವಿಲೇವಾರಿ ಮಾಡುವ ಸದವಕಾಶವೊಂದುಸುಸ್ಥಿತಿಯ ಕೇಸರಿ ಬಿಳಿ ಹೂಗಳ ಸಂಗ್ರಹಿಸಿದೆನಂದುಉದುರಿದ್ದ ಗರಿಗಳ ಜೊತೆಯಲಿ ಸಿಂಗರಿಸಿದೆ ನೊಂದು ಪಕಳೆಗಳಲಿ ಅರಳಿರುವ ಸುಲಲಿತ ಚಿತ್ತಾರವಿದುಸುಪ್ರಭಾತದಲಿ ಮೂಡಿರುವ ಕಾವ್ಯೋದಯವಿದುರಸದೌತಣದ ಕೊಡುಗೆಯು ಕಲೋಪಾಸಕರಿಗಿಂದುಆಸ್ವಾದಿಸುತ ಆನಂದಿಸಲು ನಾವುನೀವು

ಅನಾನಸ್ ಹಣ್ಣಿನ ಶಿರದ ಕಿರೀಟವ ಭುವಿಯಲಿಟ್ಟುಹೊರ ಕವಚದ ಮೇಲಿನ ಬೊಟ್ಟುಗಳ ಸುತ್ತಲಿಟ್ಟುಪದಪುಂಜಗಳಲಿ ಸುಲಲಿತ ಕಾವ್ಯ ಚಿತ್ತಾರದ ಹುಟ್ಟುಅರುಣೋದಯದಲಿ ಸುಮನಗಳಿಗೆ ಮನರಂಜನೆ ದುಪ್ಪಟ್ಟು

ತುರಿದೆನು ಬಿಳಿ ಮೂಲಂಗಿ ರಾಯತಕ್ಕೆತಂದೆನೆರಡು ಗುಲಾಬಿಗಳ ಅಂಗಳಕ್ಕೆಇರಿಸಲು ಪುಟ್ಟ ಹೂಗಳ ಅಲಂಕಾರಕ್ಕೆಹಸಿರ ಗರಿಗಳು ಸಂಮೃದ್ಧ ಚೇತನಕ್ಕೆ ಅರಳಿತು ಚಿತ್ತಾರ ಕ್ರಿಯಾಶೀಲ ಜೋಡಣೆಯಲಿಮೂಡಿತು ಲಘು ಕಾವ್ಯ ಪದಪುಂಜಗಳಲಿಬರುತಿದೆ ಸುಮನಗಳಲ್ಲಿಗೆ ನಲ್ಮುಂಜಾವಲಿಆರಂಭಿಸಲು ನಿತ್ಯ ಕಲಾಪಗಳ ಸಂತಸದಲಿ

ಗಿಡಗಳಿಗೆ ನೀರುಣಿಸುವ ಸಮಯದಲಿಬಿಳಿ ಪಿಂಕಿನ ನಿತ್ಯ ಪುಷ್ಪಗಳಿತ್ತು ಅರಳುತಲಿನೇರಳೆ ಸ್ಪಟಿಕ ಮೊಗ್ಗುಗಳಿತ್ತು ಗೊಂಚಲಿನಲಿಕೆಂಪು ನಾಮದಾಸವಾಳಗಳು ಬಾಗಿತ್ತು ತೂಗುತಲಿ ಕೂಗಿ ಕರೆದವು ಬರೆವೆವು ನಿಮ್ಮ ಜೊತೆಯಲಿನಮ್ಮನೂ ಜೋಡಿಸಿ ಚಿತ್ತಾರ ಮಾಡೆಂದು ಉಲಿಯುತಲಿಚಂದದಲಿ ಅಲಂಕರಿಸಿದೆ ರಂಗೋಲಿ ರೂಪದಲಿಮೂಡಿತದುವೇ

ಹೂಗುಚ್ಛಕ್ಕೆ ಉಪಯೋಗಿಸುವ ಹಸಿರೆಲೆ ಗರಿಗಳುಬಿಡಿಸಿ ಜೋಡಿಸಿದಾಗ ಅರಳಿರುವ ಪಚ್ಚೆ ಪುಷ್ಪಗಳುಕೈತೋಟದಲಿ ತೂಗುತಿದ್ದ ಶ್ವೇತ ತುಂಬೆಹೂಗಳುತೋಟಗಳ ಅಂಚಿನಲಿ ಶೋಭಿಸುವ ಕುಡಿಗಳು ಕ್ರಿಯಾಶೀಲ ಕಲೆಯಲಿನ ಸುಲಲಿತ ಚಿತ್ತಾರವುಶುಭೋದಯದಿ ಮೂಡಿರುವ ಲಘು ಕಾವ್ಯವುಅಭಿಮಾನಿಗಳ ಮನೋಲ್ಲಾಸಕ್ಕಾಗಿ ಅರ್ಪಿತವುದಿನವಿಡೀ ಉಲಿಯಲು ಮನದ
Website Design and Development By ❤ Serverhug Web Solutions