ಕಲಬುರಗಿ/ಚಿತ್ತಾಪೂರ:ತಾಲೂಕಿನ ರೇವಣಸಿದ್ದ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿದ್ದ(ಪ್ರಸ್ತುತ ವರ್ಗಾವಣೆ ಗೊಂಡಿರುತ್ತಾರೆ)ಡಾ.ಪಂಡಿತ್ ಬಿ ಕೆ ಅವರಿಗೆ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮದ ಅಡಿಯಲ್ಲಿ ಮಾಡಿದ ಸಾಧನೆಗಾಗಿ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.2015-16 ನೇಯ ಸಾಲಿನಿಂದ 2021-2022 ರ ವರೆಗೆ ಒಟ್ಟು 7 ವರ್ಷಗಳ ಅವಧಿಯವರೆಗೆ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಇವರು ಸುಮಾರು ಗ್ರಾಮಗಳಲ್ಲಿ ವಿಶೇಷ ಶಿಬಿರ ಹಮ್ಮಿಕೊಂಡು ಆ ಮುಲಕ ಅಲ್ಲಿನ ಜನರಿಗೆ ಮತದಾನದ ಅರಿವು,ಮಹಿಳಾ ಶೌಚಾಲಯ,ಸ್ವಚ್ಚತೆ,ಪರಿಸರ ಜಾಗ್ರತಿ,ಅಪೌಷ್ಟಿಕತೆ ಹಾಗೂ ರಕ್ತದಾನ ಮಹತ್ವ ಸೇರಿದಂತೆ ಅನೇಕ ವಿಷಯಗಳ ಕುರಿತು ಜಾಗ್ರತಿ ಮೂಡಿಸುವ ಕಾರ್ಯಕ್ರಮಗಳನ್ನು ಅಯೊಜಿಸುವುದರ ಮೂಲಕ ಈ ಸೇವಾ ಯೋಜನೆಯ ಮಹತ್ವವನ್ನು ಮೌಲ್ಲಿಕರಿಸಿದ್ದಾರೆ ಆದ್ದರಿಂದ ಸೇವಾ ಸಾಧನೆ ಗುರುತಿಸಿ ಸರ್ಕಾರ ಅಕ್ಟೋಬರ್ 11 ರಂದು ನಾಳೆ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ರಾಜಭವನದ ಬ್ಯಾಂಕ್ವಟ್ ಹಾಲ್ ನಲ್ಲಿ ಪ್ರಶಸ್ತಿ ಪ್ರಧಾನ ಮಾಡುತ್ತಿದ್ದು ಪ್ರಶಸ್ತಿ ಸ್ವೀಕರಿಸಲು ಕಡ್ಡಾಯವಾಗಿ ಹಾಜರಿರುವಂತೆ ರಾಜ್ಯ ಸೇವಾ ಯೋಜನೆಯ ಇಲಾಖೆಯಿಂದ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.ನಾಳೆ ಪ್ರಶಸ್ತಿ ಸ್ವೀಕರಿಸಲಿರುವ ಡಾ.ಪಂಡಿತ್ ಬಿ ಕೆ ರವರ ಈ ಸಾಧನೆಗಾಗಿ ಕಾಲೇಜಿನ ಸಿಬ್ಭಂದಿಗಳು ವಿದ್ಯಾರ್ಥಿಗಳು ಕುಟುಂಬಸ್ಥರು ಹಾಗೂ ಅವರ ಒಡನಾಡಿಗಳು ಸಂತಸ ವ್ಯಕ್ತಪಡಿಸಿದ್ದಾರೆ ವರದಿ:ಮಹಾದೇವ ವಿಶ್ವಕರ್ಮ




















