
ಗೃಹ ಜ್ಯೋತಿ ಸರ್ವೇ ನೂರಕ್ಕೆ ನೂರರಷ್ಟು ಪ್ರಗತಿ ಸಾಧಿಸಲು ಸೂಚನೆ.
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ಹೆಸ್ಕಾಂ ಕಚೇರಿಯಲ್ಲಿ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.
ಧ್ವಜಾರೋಹಣವನ್ನು ಶಾಖಾಧಿಕಾರಿಗಳಾದ ಆರ್ ಆರ್ ಲಾಳಸಂಗಿ ಅವರು ನೆರವೇರಿಸಿದರು. ನಂತರ ಮಾತನಾಡಿದ ಅವರು ಕಂಪನಿ ಆರ್ಥಿಕ ಸ್ಥಿತಿಯು ಅಷ್ಟೊಂದು ಸರಿಯಾಗಿ ಇರೋದಿಲ್ಲ ಆದ ಕಾರಣ ಕಂಪನಿಗೆ ಬರಬೇಕಾದ ಬಾಕಿ ವಸೂಲಾತಿ ಮಾಡಬೇಕು, ಅದರ ಜೊತೆಗೆ ಲೈನ್ ಲಾಸ್ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಗೃಹ ಜ್ಯೋತಿ ಸರ್ವೆಯ ಕೊನೆಯ ದಿನಾಂಕ 31/08/2026 ಇರುವದರಿಂದ ಅದರೊಳಗೆ ಎಲ್ಲರೂ ಕೂಡಿಕೊಂಡು ನೂರಕ್ಕೆ ನೂರರಷ್ಟು ಸರ್ವೇಯನ್ನು ಮುಗಿಸಲೇಬೇಕು ಎಂದು ತಿಳಿಸಿದರು.
ಹೊಸದಾಗಿ ಶಾಖೆಗೆ ಆಗಮಿಸಿದ ಕಿರಿಯ ಪವರ್ ಮೆನ್ ಚೇತನ್ ಕರಾಳೆ ಯವರನ್ನು ಸನ್ಮಾನಿಸಿ ಸ್ವಾಗತಿಸಲಾಯಿತು.
ಪದೋನ್ನತಿ ಹೊಂದಿ ವರ್ಕ್ ಯೂನಿಟ್ ಗೆ ವರ್ಗಾವಣೆಗೊಂಡ ಲಕ್ಷ್ಮಣ್ ಅರಳದಿನ್ನಿ ಅವರಿಗೂ ಸನ್ಮಾನಿಸಿದರು.
ಸಂತೋಷ್ ಬಣಗೊಂಡೇ ಯವರು ಮಾತನಾಡಿ ಎಲ್ಲರೂ ಮುಂಜಾಗೃತಾ ಕ್ರಮ ವಹಿಸಿ ಯಾವುದೇ ಅಪಘಾತ ಆಗದ ಹಾಗೆ ಕಾರ್ಯ ನಿರ್ವಹಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಶಾಖೆಯ ಎಲ್ಲಾ ಪವರ್ ಮೆನ್ ಗಳು ಹಾಗೂ ಗ್ರಾಮ ವಿದ್ಯುತ್ ಪ್ರತಿನಿಧಿಗಳು ಮತ್ತು ಸ್ಟೇಷನ್ ಆಪರೇಟರ್ ಗಳು ಪಾಲ್ಗೊಂಡಿದ್ದರು.
ವರದಿ ಮನೋಜ್ ನಿಂಬಾಳ




















