ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ರಕ್ತದಾನ ಮಾಡಿ ಮತ್ತು ಜೀವ ಉಳಿಸಿ

ಬೀದರ್:ಅಪೋಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಸಂಸ್ಥಾಪಕಿ ಮಾತೆ ವೆರೋನಿಕರವರ ದ್ವಿ ಶತಮಾನೋತ್ಸವದ ಸಂದರ್ಭದಲ್ಲಿ ಮರಿಯ ನಿಲಯ ಮತ್ತು ಕಾರ್ಮೆಲ್ ನಿಕೇತನದ ಸಹೋದರಿಯರು ಆಯೋಜಿಸಿದ
ರಕ್ತದಾನ ಶಿಬಿರ ಬ್ರಿಮ್ಸ್ ಆಸ್ಪತ್ರೆ,ಬೀದರ್ ಸಂಯೋಗದಲ್ಲಿ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ ಬೀದರ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪರಮಪೂಜ್ಯ ಬಿಷಪ್ ರಾಬರ್ಟ್ ಮೈಕಲ್ ಮಿರಂದ್ ಗುಲ್ಬರ್ಗ ಧರ್ಮ ಕ್ಷೇತ್ರ,ಫಾದರ್ ಅನಿಲ್ ಜೋಯಲ್ ಪ್ರಸಾದ್, ಫಾದರ್ ವಿಲ್ಸನ್ ಫರ್ನಾಂಡಿಸ್,ಡಾಕ್ಟರ್ ಅನಿಲ್ ಚಿಂತಾಮಣಿ ಡಿಟಿಓ ಪ್ರೋಗ್ರಾಮ್ ಬೀದರ್, ಡಾಕ್ಟರ್ ಮಲ್ಲನಗೌಡ ಪಾಟೀಲ್ ಬ್ಲಡ್ ಬ್ಯಾಂಕ್ ಬ್ರೀಮ್ಸ್ ಬೀದರ್,ಶ್ರೀಮತಿ ಅನಿತಾ ಚಿಂತಾಮಣಿ ಇನ್ನರ್ ವಿಲ್ ಕ್ಲಬ್ ಅಧ್ಯಕ್ಷರು ಬೀದರ್,ಶ್ರೀಮತಿ ಕವಿತಾ ಪ್ರಭಾ ಕಾರ್ಯದರ್ಶಿಗಳು ಇನ್ನರ್ವಿಲ್ ಕ್ಲಬ್ ಬೀದರ್,ಆಯೋಜಕರಾದ ಸಿಸ್ಟರ್ ಕ್ರಿಸ್ತಿನ್ ಮಿಸ್ಕಿತ್,ಸಿಸ್ಟರ್ ರಿತಿಕಾ ಹಾಗೂ ಬ್ರೀಮ್ಸ್ ಆಸ್ಪತ್ರೆಯ ಸಿಬ್ಬಂದಿಗಳು,ಕಾರ್ಮೆಲ್ ಸೇವಾ ಟ್ರಸ್ಟ್ ಸಿಬ್ಬಂದಿಗಳು,ಮರಿಯನಿಲಯದ ಕನ್ಯಾ ಭಗಿನಿ ನಿಯರು ಹಾಗೂ ರಕ್ತದಾನಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸೃಷ್ಟಿಕರ್ತನಿಗೆ ವಂದಿಸುವುದರ ಮೂಲಕ ಪ್ರಾರಂಭಿಸಲಾಯಿತು.ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಸಲ ರಕ್ತದಾನ ಮಾಡಿದ ದಾನಿಗಳಿಗೆ ಇದೇ ವೇದಿಕೆ ಮೇಲೆ ಸನ್ಮಾನಿಸಲಾಯಿತು ವೇದಿಕೆ ಮೇಲೆ ಇದ್ದ ಎಲ್ಲಾ ಗಣ್ಯರನ್ನು ಸಿಸ್ಟರ್ ರೀತಾರವರು ಸ್ವಾಗತಿಸಿದರು. ಸಿಸ್ಟರ್ ಕ್ರೇಸ್ಟ್ ರವರು ವಂದಿಸಿದರು.ಇದೇ ಸಂದರ್ಭದಲ್ಲಿ ಗುಲ್ಬರ್ಗ ಧರ್ಮ ಕ್ಷೇತ್ರದ ಪರಮಪೂಜ್ಯ ಬಿಷಪ್ ರಾಬರ್ಟ್ ಮೈಕಲ್ ಮಿರಂದ್ ರವರು ಮಾತನಾಡಿ ಇಲ್ಲಿರುವ ಸಿಸ್ಟರ್ಸ್ ಗಳು 1983 ರಿಂದ ಶಿಕ್ಷಣ ಕ್ಷೇತ್ರದಲ್ಲಿ,ಸಮಾಜ ಸೇವೆಯಲ್ಲಿ ತಮ್ಮ ಅತ್ಯಮೂಲ್ಯ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ ಅವರ ಸೇವೆ ನಿಜವಾಗಿಯೂ ಅಮೂಲ್ಯವಾದದ್ದು ಇಂದು ಮಾತೆ ವೆರೋನಿಕರವರ ದ್ವಿಶತಮಾನೋತ್ಸವದ ಅಂಗವಾಗಿ ಈ ಒಂದು ರಕ್ತದಾನ ಕಾರ್ಯಕ್ರಮವು ನಿಜವಾಗಿಯೂ ತುರ್ತು ಸಂದರ್ಭದಲ್ಲಿ ಎಷ್ಟು ರೋಗಿಗಳ ಪಾಲಿಗೆ ಮರುಜನ್ಮ ನೀಡುವ ಸಂಜೀವಿನಿ ಆಗಲಿದೆ ಸಮಾಜ ನನಗೆ ಏನು ಮಾಡಿದೆ ಎಂಬುದು ಮುಖ್ಯವಲ್ಲ ಆದರೆ ನಾನು ಸಮಾಜಕ್ಕೆ ಏನನ್ನು ಮಾಡಬಹುದು ಎಂಬುದು ಮುಖ್ಯ ನಮ್ಮ ಕೈಲಾದ ಮಟ್ಟಿಗೆ ನಾವು ಸಮಾಜಕ್ಕೆ ಹಾಗೂ ನಮ್ಮ ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸಿದರೆ ಅದಕ್ಕಿಂತ ಗೌರವವಾದ ಸಾರ್ಥಕ ಜೀವನ ಮತ್ತೊಂದಿಲ್ಲ ಎಂದು ಪರಮಪೂಜ್ಯರು ಹೇಳಿದರು ಹಾಗೂ ಇದೇ ಸಂದರ್ಭದಲ್ಲಿ ಶ್ರೀಮತಿ ಅನಿತಾ ಚಿಂತಾಮಣಿ ಇನ್ನರ್ವಿಲ್ ಕ್ಲಬ್ ಅಧ್ಯಕ್ಷರು ಮಾತನಾಡಿ ರಕ್ತದಾನ ಮಾಡುವುದರಿಂದ ನಮಗೆ ಆಗುವ ಲಾಭಗಳು ಹಾಗೂ ಇದರ ಬಗ್ಗೆ ಜಾಗೃತಿಯನ್ನು ತಮ್ಮದೇ ಮಾತಿನಲ್ಲಿ ಎಲ್ಲರಿಗೂ ಮನಮುಟ್ಟುವಂತೆ ಹೇಳಿದರು ಮತ್ತು ಎಲ್ಲಾ ರಕ್ತದಾನಿಗಳಿಗೆ ತನ್ನ ಮನಪೂರ್ವಕ ಧನ್ಯವಾದಗಳನ್ನು ತಿಳಿಸಿದರು.
ವರದಿ-ಮಹಾನ್ ಕೋಟೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ