ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸೊರಬದಲ್ಲಿ 15ನೇ ವರ್ಷದ ದಸರಾ ಉತ್ಸವ

ಅ.21 ಕ್ಕೆ ಜಂಗೀ ಕುಸ್ತಿ, ಮಹಿಳಾ ದಸರಾ,ಅ.24 ಬನ್ನಿ ಮುಡಿಯುವ ಕಾರ್ಯಕ್ರಮ,ವಿಜಯದಶಮಿ

ಸೊರಬ:ದಸರಾ ಉತ್ಸವ ಸಮಿತಿ,ತಾಲೂಕು ಆಡಳಿ, ಪುರಸಭೆ ಸೊರಬ ಇವರುಗಳ ಸಹಯೋಗದಲ್ಲಿ ಅ.15 ರಿಂದ ಅ.24 ರವರೆಗೆ ಶ್ರೀ ರಂಗನಾಥ ಸ್ವಾಮಿ ದೇವಾಲಯದ ಸುರಭಿ ಸಾಂಸ್ಕೃತಿಕ ವೇದಿಕೆಯಲ್ಲಿ ಸಾರ್ವಜನಿಕ ದಸರಾ ಉತ್ಸವ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಜಿ.ಪ್ರಶಾಂತ ಮೇಸ್ತ್ರಿ ತಿಳಿಸಿದ್ದಾರೆ.
ಇಂದು ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ಸಮಿತಿಯ ವತಿಯಿಂದ ಕಳೆದ 14 ವರ್ಷಗಳಿಂದ ಸಾರ್ವಜನಿಕರ ಸಹಕಾರದಿಂದ ಉತ್ತಮವಾದ ದಸರಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದ್ದು,ಈ ಬಾರಿ 15ನೇ ವರ್ಷದ ದಸರಾ ಉತ್ಸವವನ್ನು ಇನ್ನಷ್ಟು ವಿಜೃಂಭಣೆಯಿoದ ಆಚರಿಸಲಾಗುವುದು ಎಂದು ತಿಳಿಸಿದರು.

ಅ.15 ರ ಭಾನುವಾರ ಬೆಳಿಗ್ಗೆ 9.30 ರಿಂದ 10ರವರೆಗಿನ ಸುಮುಹೂರ್ತದಲ್ಲಿ ಶ್ರೀ ದುರ್ಗಾವಿಜಯ ಪ್ರತಿಷ್ಠಾಪನಾ ಪೂಜೆ ನೆರವೇರಲಿದ್ದು,ಸಂಜೆ 6 ಗಂಟೆಗೆ ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮೀಜಿ ಸಾನಿಧ್ಯದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು,ಸಚಿವ ಎಸ್. ಮಧು ಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಸಮಿತಿಯ ಅಧ್ಯಕ್ಷ ಪ್ರಶಾಂತ ಮೇಸ್ತ್ರಿ ಅಧ್ಯಕ್ಷತೆಯಲ್ಲಿ ಸಣ್ಣಬೈಲು ಪರಶುರಾಮ ಅವರಿಂದ ಪ್ರಾಸ್ತಾವಿಕ ನುಡಿ,ನಿಕಟಪೂರ್ವ ಅಧ್ಯಕ್ಷ ಷಣ್ಮುಖಾಚಾರ್ ಅವರಿಂದ ಆಶಯ ನುಡಿ ನಡೆಯಲಿದೆ ನಂತರ ಮೇಘ ಮತ್ತು ಕಲಾವೃಂದ ಭದ್ರಾವತಿ ಅವರಿಂದ ಸ್ಯಾಕ್ಸೋಫೋನ್ ಮಂಗಳ ವಾದ್ಯಗೋಷ್ಠಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

ಅ.16 ರ ಸೋಮವಾರ ಸಂಜೆ ನಡೆಯುವ ಸಭಾ ಕಾರ್ಯಕ್ರಮದ ನಂತರ ಲಕ್ಷ್ಮಿ ಮುರುಳೀಧರ ಹಾಗೂ ವೈಷ್ಣವಿ ವೈದ್ಯ ಅವರಿಂದ ಸಂಗೀತ ಲಹರಿ ಮತ್ತು ಸಿರಿಗಂಧ ತಂಡದವರಿoದ ಗೀತಗಾಯನ ನಡೆಯಲಿದೆ.
ಅ.17 ರ ಮಂಗಳವಾರ ಎಂ.ಎಸ್.ಭರತನಾಟ್ಯ ಶಾಲೆ ವಿದ್ಯಾರ್ಥಿಗಳಿಂದ ಭರತನಾಟ್ಯ ಹಾಗೂ ಸ್ವರಾಂಜಲಿ ತಂಡ ಭೀಮನಕೋಣೆ ಅವರಿಂದ ಸ್ವರಾಂಜಲಿ ಕಾರ್ಯಕ್ರಮ
ಅ.18 ರ ಬುಧವಾರ ಮಧ್ಯಾಹ್ನ 3.30ಕ್ಕೆ ಕವಿಗೋಷ್ಠಿ ಹಾಗೂ ಸಂಜೆ ಜನಪದ ಕಲಾವಿದ ಶಿವರುದ್ರಪ್ಪ ಜೋಗಿ ತಂಡದವರಿoದ ಜಾನಪದ ವೈಭವ,ಎಬಿಸಿಡಿ ಡ್ಯಾನ್ಸ್ ಗ್ರೂಪ್ ಅವರಿಂದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ ಜರುಗಲಿದೆ.

ಅ.19 ರ ಗುರುವಾರ ಸಂಜೆ ವಸಂತಕುಮಾರ್ ಬಾಂಬೋರೆ ತಂಡದವರಿoದ ಭಕ್ತಿ ಸಂಗೀತ ಹಾಗೂ ಆಕಾಶವಾಣಿ ಕಲಾವಿದ ಹೆಚ್.ಗುರುಮೂರ್ತಿ ತಂಡದವರಿoದ ರಸಮಂಜರಿ ಕಾರ್ಯಕ್ರಮ

ಅ.20 ರ ಶುಕ್ರವಾರ ಸಂಜೆ ಪುಟ್ಟರಾಜ ಗವಾಯಿ ಸಂಗೀತ ಶಾಲೆಯ ಪ್ರವೀಣ ಭಂಡಾರಿ ಮತ್ತು ಶಿಷ್ಯ ವೃಂದದಿoದ ಲಘು ಸಂಗೀತ ಹಾಗೂ ದತ್ತಮೂರ್ತಿ ಭಟ್ ಸಂಚಾಲಕತ್ವದಲ್ಲಿ ನಾಟ್ಯಶ್ರೀ ಕಲಾತಂಡ ಶಿವಮೊಗ್ಗ ಅವರಿಂದ ಮಾರುತಿ ಪ್ರತಾಪ ಪ್ರಸಂಗ ಯಕ್ಷಗಾನ ನಡೆಯಲಿದೆ.

ಅ.21 ರ ಶನಿವಾರ ಮಧ್ಯಾಹ್ನ 2.30 ಕ್ಕೆ ಜಂಗೀ ಕುಸ್ತಿ ಪಂದ್ಯಾವಳೀ ನಡೆಯಲಿದೆ ಸಂಜೆ ನಡೆಯುವ ಮಹಿಳಾ ದಸರಾ ಸೌರಭ ಕಾರ್ಯಕ್ರಮವನ್ನು ಅನಿತಾ ಮಧು ಬಂಗಾರಪ್ಪ ಉದ್ಘಾಟಿಸಲಿದ್ದು, ಸಮಿತಿಯ ಮಹಿಳಾ ಅಧ್ಯಕ್ಷೆ ಸುಜಾತ ಜೋತಾಡಿ ಅಧ್ಯಕ್ಷತೆ ವಹಿಸಲಿದ್ದಾರೆ ನಂತರ ಹೆಚ್.ವಿ.ಸೌಮ್ಯ ಮತ್ತು ವೃಂದ ಬೆಂಗಳೂರು ಕವರಿಂದ ಗಜಗೌರಿ ವೃಥ ಹರಿಕಥೆ ಕಾಲಕ್ಷೇಪ,ಸ್ಥಳೀಯ ಮಹಿಳಾ ಸದಸ್ಯರಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ.

ಅ.22 ರ ಭಾನುವಾರ ಬೆಳಿಗ್ಗೆ ನವಚಂಡಿಕಾ ಹೋಮ,ಪೂರ್ಣಾಹುತಿ,ಮಹಾಮಂಗಳಾರತಿ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ವನಸುಮ ಕಲಾ ಬಳಗದಿಂದ ಜಾನಪದ ಗೀತ ಗಾಯನ, ವಿಜಯಕುಮಾರ್ ಬಾಂಬೋರೆ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಅ.23 ರ ಸೋಮವಾರ ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು,ಸುರಭಿ ಮಹಿಳಾ ಯಕ್ಷ ಬಳಗದಿಂದ ಶ್ರೀ ದೇವಿ ಮಹಾತ್ಮೆ ಮಹಿಳಾ ಯಕ್ಷಗಾನ ನಡೆಯಲಿದೆ.

ಅ.24 ರ ಮಂಗಳವಾರ ಮಧ್ಯಾಹ್ನ 3 ಗಂಟೆಯಿoದ ಪಟ್ಟಣದ ವಿವಿಧ ದೇವರುಗಳ ಪಲ್ಲಕ್ಕಿ ಉತ್ಸವದೊಂದಿಗೆ ಸಚಿವ ಮಧು ಬಂಗಾರಪ್ಪನವರ ನೇತೃತ್ವದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ, ವಿಶೇಷ ಸಿಡಿಮದ್ದು ಪ್ರದರ್ಶನ,ದುರ್ಗಾದೇವಿಯ ವಿಸರ್ಜನಾ ಕಾರ್ಯಕ್ರಮ ನಡೆಯಲಿದ್ದು, ಈ ಎಲ್ಲಾ ಕಾರ್ಯಕ್ರಮಗಳಿಗೆ ಸಾರ್ವಜನಿಕರು,ಪುರ ನಾಗರೀಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಮ್ಮೂರ ದಸರಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡುವಂತೆ ಕೋರಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಎನ್.ಷಣ್ಮುಖಾಚಾರ್,ಮಹಿಳಾ ಅಧ್ಯಕ್ಷೆ ಸುಜಾತ ಜೋತಾಡಿ,ಸಮಿತಿಯ ಪದಾಧಿಕಾರಿಗಳಾದ ಬಂದಿಗೆ ಬಸವರಾಜ್ ಶೇಟ್,ಡಿ.ಎಸ್.ಶಂಕರ್ ಶೇಟ್,ರಮೇಶ್ ಮಂಚಿ,ಬಸವಂತಪ್ಪ ಗುರ್ಕಿ,ಸಿ.ಪಿ.ಈರೇಶಗೌಡ ಉಪಸ್ಥಿತರಿದ್ದರು.
ವರದಿ-ಸಂದೀಪ ಯು.ಎಲ್.,ಕರುನಾಡ ಕಂದ ನ್ಯೂಸ್,ಸೊರಬ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ