ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಿ.ಸಿ.ಬಿ ಪೋಲಿಸರ ಕೈಗೆ ಸಿಕ್ಕಿಬಿದ್ದ ಅಪಹರಣಕಾರರು:ಆರೋಪಿಗಳಿಗೆ ಬಂಧನ

ಬೆಂಗಳೂರು:ನಾವು ಸಿ.ಸಿ.ಬಿ ಪೋಲಿಸರು ಎಂದು ಹೇಳಿಕೊಂಡು ಒಬ್ಬ ವ್ಯಕ್ತಿಯನ್ನು ಅಪಹರಣ ಮಾಡಿ 5 ಲಕ್ಷ ರೂಪಾಯಿ ಬೇಡಿಕೆಯಿಟ್ಟ ಗುಂಪನ್ನು ಸಿ.ಸಿ.ಬಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳು ಮೊಹಮ್ಮದ್ ಖಾಸಿಂ ಮುಜಾಹಿದ್,ಮುಕ್ತಿಯಾರ್,ವಸಿಂ,ಶಬ್ಬೀರ್ ಹಾಗೂ ಶೋಯಿಬ್ ಇದರಲ್ಲಿ ಒಬ್ಬ ಆರೋಪಿ ಮೊಹಮ್ಮದ್ ಖಾಸಿಂ ಮುಜಾಹಿದ್ ಸಿ.ಸಿ.ಬಿ ಪೋಲಿಸ ಆಯುಕ್ತ ನಾಗಿದ್ದು. ಈತನು ಸಿ.ಸಿ.ಬಿ ಕಚೇರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದನು.ಮೊಬೈಲ್ ಶಾಪ್ ಮಾಲಿಕ ಕಾಲು ಸಿಂಗ್ ಅವರನ್ನು ಸೆಪ್ಟಂಬರ್ 2 ರಂದು ಕಾರಿನಲ್ಲಿ ಬರುತ್ತಿದ್ದಾಗ ವಿ.ವಿ ಪುರಂ ಬಳಿ ಅಪಹರಣಕಾರರು ಆತನನ್ನು ಅಡ್ಡಗಟ್ಟಿ ಸುತ್ತುವರಿದು ಕಾಲು ಸಿಂಗ್ ಅವರನ್ನು ಹೆದರಿಸಿ ಆತನನ್ನು ಕಾರಿನ ಹಿಂಬದಿ ಸೀಟಿನಲ್ಲಿ ಕೂರಿಸಿ ನಾವು ಸಿ.ಸಿ.ಬಿ ಪೋಲಿಸರು ಎಂದು ಹೇಳಿಕೊಂಡು. ನೀನು ಗಾಂಜಾ ಸರಬರಾಜು ಮಾಡುತ್ತಿದ್ದೀಯಾ ಎಂಬ ಖಚಿತ ಮಾಹಿತಿ ಇದೆ ಎಂದು ಹೆದರಿಸಿ ಕಾಲು ಕಣ್ಣಿಗೆ ಬಟ್ಟೆ ಕಟ್ಟಿ ವಿಲ್ಸನ್ ಗಾರ್ಡನ್ ಮನೆಯೊಂದರಲ್ಲಿ ಕೂಡಿ ಹಾಕಿದ್ದಾರೆ.
ಮನೆಯಲ್ಲಿ ಕೂಡಿ ಹಾಕಿದ ಮೇಲೆ ಕಾಲು ಸಿಂಗ್ ಗೆ ಮಾರಕಾಸ್ತ ತೋರಿಸಿ ಬೆದರಿಸಿ ಆತನ ಮೊಬೈಲ್ ನಿಂದ ಆತನ ಗೆಳೆಯನಿಗೆ ಫೋನ್ ಮಾಡಿ ನಾವು ಸಿ.ಸಿ.ಬಿ ಪೋಲಿಸರು ಎಂದು ಹೇಳಿ ಕಾಲು ಸಿಂಗ್ ಗೆಳೆಯನಿಗೆ 5 ಲಕ್ಷ ರೂಪಾಯಿ ಬೇಡಿಕೆಯಿಟ್ಟರು ಕೈ ಕಾಲು ಮುಗಿದರೂ ಬಿಡದೆ ಕಾಲು ಸಿಂಗ್ ಗೆಳೆಯರಿಗೆ ಪರಿಚಿತ ಪೋಲಿಸರಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಸಿ.ಸಿ.ಬಿ ಪೋಲಿಸರಿಗೆ ಮಾಹಿತಿ ಸಿಕ್ಕಿದೆ ಎಂದು ಅರಿತ ಅಪಹರಣಕಾರರು ಕಾಲು ಸಿಂಗ್ ಅವರನ್ನು ಬಿಟ್ಟು ಹೋಗಿದ್ದಾರೆ.
ಮಾಹಿತಿ ತಿಳಿದು ವಿ.ವಿ ಪುರಂ ಪೋಲಿಸ ಠಾಣೆಯಲ್ಲಿ ದೂರ ದಾಖಲು ಮಾಡಿದರು ಎನ್.ಸಿ.ಆರ್ ದಾಖಲಿಸಿಕೊಂಡು ವಿ.ವಿ ಪುರಂ ಪೋಲಿಸ ಠಾಣೆಯ ಅಧಿಕಾರಿಗಳು ಅಪಹರಣಕಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವರದಿ ರಾಜಶೇಖರ ಮಾಲಿ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ