ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಲಯ ಅರಣ್ಯಾಧಿಕಾರಿಗಳಿಂದ ಆರೋಪಿಗಳ ಸೆರೆ

ಸೊರಬ:ಖಚಿತ ಮಾಹಿತಿಯ ಮೇರೆಗೆ ಸೊರಬ ವಲಯ ಅರಣ್ಯಾಧಿಕಾರಿಗಳು ಉಳವಿ ಗ್ರಾಮದ ಎರಡು ಮನೆಗಳ ಮೇಲೆ ದಾಳಿ ನಡೆಸಿ ಕಾಡುಕೋಣದ ಮಾಂಸ ಹಾಗೂ ಇಬ್ರಾಹಿಂ ಖಾಲಿದ್ ಅಲಿಯಾಸ್ ಬಳ್ಳಾರಿ ಎಂಬವರನ್ನು ವಶಪಡಿಸಿಕೊಂಡ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ತಾಲೂಕಿನ ಉಳವಿ ಗ್ರಾಮದ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಾಡುಕೋಣವನ್ನು ಅಕ್ರಮವಾಗಿ ಬೇಟೆಯಾಡಿ ಅದರ ಮಾಂಸವನ್ನು ಸಂಗ್ರಹಿಸಿಡಲಾಗಿದೆ ಎಂಬ ಖಚಿತ ಮಹಿತಿಯ ಮೇರೆಗೆ ಮಂಗಳವಾರ ಉಳವಿ ಗ್ರಾಮದ ಇಬ್ರಾಹಿಂ ಎಂಬುವವರ ಮನೆಯ ಮೇಲೆ ಸೊರಬ ವಲಯ ಅರಣ್ಯಾಧಿಕಾರಿ ಜಾವಿದ್ ಭಾಷಾ ಅಂಗಡಿ ರವರ ನೇತೃತ್ವದಲ್ಲಿ ದಾಳಿ ನಡೆಸಲು ಮುಂದಾದಾಗ ಮನೆಯ ಬಾಗಿಲು ತೆರೆಯದೆ ಗಂಟೆಗಟ್ಟಲೆ ಸತಾಯಿಸಿದ ಇಬ್ರಾಹಿಂ ಪೊಲೀಸ್ ಬಂದ ಬಳಿಕ ಬಾಗಿಲು ತೆರೆದಾಗ ಮನೆಯಲ್ಲಿ 6.5 ಕೆಜಿ ಕಾಡುಕೋಣ ಮಾಂಸ ಪತ್ತೆಯಾಗಿದೆ ಇಬ್ರಾಹಿಂ ಖಾಲಿದ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅದೇ ಗ್ರಾಮದ ತಸ್ವಿರ್ ಆಹ್ಮದ್ ಮನೆಯಲ್ಲಿ ಶೋಧ ನಡೆಸಿದಾಗ 16.5 ಕೆಜಿ ಮಾಂಸ ಸಿಕ್ಕಿದೆ ಆರೋಪಿ ತಸ್ವಿರ್ ಅಹ್ಮದ್ ಪರಾರಿಯಾಗಿದ್ದು ಪ್ರಕರಣಕ್ಕೆ ಸಂಬoದಿಸಿದ ನವೀದ್,ಫಾರೂಕ್ ಎಂಬುವವರು ತಲೆಮರೆಸಿಕೊಂಡಿದ್ದಾರೆ ಸೊರಬ ಅರಣ್ಯ ಇಲಾಖೆ ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ ಅರಣ್ಯ ಅಧಿಕಾರಿಗಳು ತಲೆ ಮರೆಸಿಕೊಂಡ ಆರೋಪಿಗಳಿಗೆ ಶೋಧ ಕಾರ್ಯ ನಡೆಸಿದ್ದಾರೆ ಸಾಗರದ ಡಿಸಿಫ್ ಸಂತೋಷ ಕೆಂಚಪ್ಪನವರ ಹಾಗೂ ಸೊರಬ ಎಸಿಎಫ್ ಯೋಗೀಶ್ ಮಾರ್ಗದರ್ಶನದಲ್ಲಿ ಉಪ ವಲಯ ಆರಣ್ಯಾಧಿಕಾರಿಗಳದ ಮುತ್ತಣ್ಣ, ರಾಮಪ್ಪ,ಮೋಹನ್,ಯೋಗರಾಜ್, ಪರಶುರಾಮ್,ಶರಣಪ್ಪ ಹಾಗೂ ಆರಣ್ಯ ರಕ್ಷಕರಾದ ಮಂಜು,ಆನಂದ್,ಹರಿ,ದೇವರಾಜ್,ಕಸ್ತೂರಮ್ಮ, ಅಶೋಕ್ ದಾಳಿಯಲ್ಲಿ ಪಾಲ್ಗೊoಡಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ