ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜೀವ ಸಂಕುಲದ ಮೂಲ ಡಿ.ಎನ್.ಎ

ಕಲಬುರಗಿ:ಜೀವಿಯೊಂದನ್ನು ಅಭಿವೃದ್ಧಿಪಡಿಸಲು, ಬದುಕಲು ಮತ್ತು ಸಂತಾನೋತ್ಪತ್ತಿ ಮಾಡಲು ಅಗತ್ಯವಿರುವ ಸೂಚನೆಗಳನ್ನು ಡಿಎನ್‌ಎ ಒಳಗೊಂಡಿದೆ ಎಂದು ಕೆಬಿಎನ್ ವಿವಿ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಂ.ಎ ಮುಜೀಬ ತಿಳಿಸಿದರು.
ಖಾಜಾ ಬಂದನವಾಜ ವಿಶ್ವವಿದ್ಯಾನಿಲಯ ಮನೋವಿಜ್ಞಾನ ವಿಭಾಗವು ಗುರುವಾರ ಏರ್ಪಡಿಸಿದ್ದ ಡಿಎನ್ ಎ ಒಂದು ವಿಸ್ಮಯ ಅಣು ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಡಿಎನ್‌ಎ ಅನುಕ್ರಮಗಳನ್ನು ಪ್ರೋಟೀನ್‌ಗಳನ್ನು ಉತ್ಪಾದಿಸಲು ಬಳಸಬಹುದಾದ ಸಂದೇಶಗಳಾಗಿ ಪರಿವರ್ತಿಸಬೇಕು ನಮ್ಮ ದೇಹದಲ್ಲಿನ ಹೆಚ್ಚಿನ ಕೆಲಸವನ್ನು ಮಾಡುವ ಸಂಕೀರ್ಣ ಅಣುಗಳಾಗಿವೆ. ನ್ಯೂಕ್ಲಿಯೊಟೈಡ್ ಮತ್ತು ಪ್ರೊಟೀನ್‌ಗಳು ಏಕೆ ಮುಖ್ಯ ಎಂಬುವುದನ್ನು ಮತ್ತು ಡಿಎನ್‌ಎ ಕಾರ್ಯನಿರ್ವಹಣೆಯ ಬಗ್ಗೆ ಅವರು ವಿವರಿಸಿದರು. ಕಲೆ, ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗದ ಡೀನ್ ಪ್ರೊ.ನಿಶಾತ್ ಆರೀಫ್ ಹುಸೇನ ಮಾರ್ಗದರ್ಶನ ಮಾಡಿದರು.
ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಹಾಗೂ ಸಂಯೋಜಕಿ ಶ್ರೀಮತಿ ಮನಿಷಾ ಪಾಟೀಲ್ˌಡಾ. ಹಮೀದ್ ಅಕ್ಬರ್,ಡಾ.ಮೈಮೂನ್,ಡಾ.ಅಥರ್, ಡಾ.ಅಬ್ರಾರ್,ಡಾ.ಜಾವೆದ್ ಡಾ.ನಗ್ಮಾ,ಡಾ. ಸುನಿಲ್,ಡಾ.ಮುಜೀಬ್,ಡಾ.ಅಬ್ರಾರ್,
ಡಾ.ಅತಿಯಾ,ಡಾ.ಜನಾಬ್,ಡಾ.ಸವಿತಾ,ಡಾ. ತಬಸ್ಸುಮ್,ಡಾ.ಫೆಮಿದ,ಡಾ.ನಮ್ರತಾ,ಡಾ.ಮನಿಷಾ,ಡಾ.ಮಿಲನ್,ರಮೇಶ್ ಇದ್ದರು ಬತೂಲ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಮಿಸಬಾ ಸ್ವಾಗತಿಸಿ,ಫಿರ್ದೌಸ್ ನಿರೂಪಿಸಿದರು. ಸಮಿಹಾ ವಂದಿಸಿದರು.
ವರದಿ:ಅಪ್ಪಾರಾಯ ಬಡಿಗೇರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ