ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮರಾಠ ಸಮುದಾಯದ ಬೃಹತ್ ಜಾಗೃತಿ ಸಮಾವೇಶ

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಮರಾಠ ಸಮುದಾಯದ ಬೃಹತ್ ಜಾಗೃತಿ ಸಮಾವೇಶ ನಡೆಯಿತು.ದೇಶದ ಸಮಸ್ತ ಮರಾಠಾ ಜನಾಂಗದ ಸಶಕ್ತ ಕ್ರಿಯಾಶೀಲ ನಾಯಕರೆಂದೆ ಪ್ರಸಿದ್ಧರಾಗಿರುವ ಪುರ ಮರಾಠ ಸಮಾಜರ ಕ್ರಾಂತಿ ಸೂರ್ಯ ಸನ್ಮಾನ್ಯ ಶ್ರೀ ಮನೋಜ್ ದಾದಾ ಜರಾಂಗೇ ಪಾಟೀಲ್ ಅವರ ಉಪಸ್ಥಿತಿಯಲ್ಲಿ ಮರಾಠ ಸಮುದಾಯದ ಬೃಹತ್ ಜಾಗೃತಿ ಸಮಾವೇಶ ನೆರವೇರಿತು.
ಶ್ರೀ ಮಾನ್ಯ ಶ್ರೀ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ ಸಮಾಜದ ಗಣ್ಯರು ಹಾಗೂ ಸಮಾಜದ ಎಲ್ಲಾ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ,
ಶೈಕ್ಷಣಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಆರ್ಥಿಕವಾಗಿ ಹಿಂದುಳಿದಿರುವ ಮರಾಠ ಸಮುದಾಯದಲ್ಲಿ ಜಾಗೃತಿ ಮೂಡಿಸುವುದಲ್ಲದೆ ರಾಜ್ಯದ ಸಮಸ್ತ ಮರಾಠ ಜನಾಂಗವನ್ನು ಒಗ್ಗೂಡಿಸಿ ಅದನ್ನು ಮತ್ತೆ ವೈಭವದಡೆಗೆ ಕರೆದೊಯ್ಯುವ ನಿಟ್ಟಿನಲ್ಲಿ ರಾಜ್ಯದಲ್ಲಿ ಮರಾಠ ಜನಾಂಗವನ್ನು ಸಶಕ್ತಗೊಳಿಸುವ ದಿಶೆಯಲ್ಲಿ ಪಣತೊಟ್ಟಿರುವ ಸನ್ಮಾನ್ಯ ಶ್ರೀ ಮನೋಜ ದಾದಾ ಜಾರಂಗೆ ಪಾಟೀಲ್ ಅವರು ಸಮಾವೇಶವನ್ನು ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಮರಾಠ ಸಮಾಜರ ಕ್ರಾಂತಿ ಸೂರ್ಯ ಸನ್ಮಾನ್ಯ ಶ್ರೀ ಮನೋಜ್ ದಾದಾ ಜರಾಂಗೆ ಪಾಟೀಲ್ ಹಾಗೂ ಮರಾಠ ಸಮಾಜದ ಸಮಸ್ತ ಬಾಂಧವರು,ಹಿರಿಯರು,ಶಿಕ್ಷಣ ಚಿಂತಕರು,ತಾಯಂದಿರು,ಸಹೋದರ ಸಹೋದರಿಯರು ಭಾಗವಹಿಸಿದರು.

ವರದಿ:ರೋಹನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ