ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಬದುಕಿಗೆ ಬೆಳಕಾದವರು

ಅಜ್ಜಿಯು ಹೇಳಿದ ಕಥೆಗಳ ಮೌಲ್ಯದಲಿ
ಕಳೆದೆನು ಬಾಲ್ಯವ ಪ್ರೀತಿ ಮಮತೆಯಲಿ

ತಾಯಿ ನೀಡಿದ ಮಮತೆಯ ಮುತ್ತು
ಅದು ನನ್ನ ಬಾಳಿಗೆ ಮರೆಯದ ತುತ್ತು

ದೊಡ್ಡಮ್ಮ ಚಿಕ್ಕಮ್ಮರ ಸೌಜನ್ಯದ ಸಲುಗೆ
ಸ್ಫೂರ್ತಿಯ ಬೆನ್ನೆಲುಬು ನನ್ನ ಬದುಕಿಗೆ

ತಿದ್ದಿ ಬುದ್ಧಿಯ ಹೇಳಿದರು ಗುರು ಮಾತೆಯರು
ನಮ್ಮ ಜೀವನಕ್ಕೆ ದೇವರಾದ ಮಹಾತ್ಮರು

ಅತ್ತೆ ಅಬ್ಬರಿಸಿದರೂ ತಿದ್ದಿದಳು ತನ್ನಂತೆ
ಅವಳ ಕಾಳಜಿಗೆ ತಲೆಬಾಗುವದು ಧನ್ಯತೆ

ಅಕ್ಕ ತಂಗಿಯರ ವಾತ್ಸಲ್ಯದ ನುಡಿಗಳು
ಸಾಧನೆಯ ಹಾದಿಗೆ ಬೆಲೆಕಟ್ಟಲಾಗದ ಜೀವನಾಡಿಗಳು

ಅತ್ತಿಗೆ ಕಲಿಸಿದಳು ಜವಾಬ್ದಾರಿ
ನಿಮಗೆ ನಾನೆಂದು ಆಭಾರಿ

ಸಪ್ತಪದಿಯ ತುಳಿದು ಬಂದೆ ಹೆಂಡತಿಯಾಗಿ
ಸಂಸಾರದ ಭಾರ ಹೊರಲು ಜೊತೆಯಾಗಿ

ದೇವತೆಯಾಗಿ ಹುಟ್ಟಿ ಬಂದಳು ತಾಯಿಯೇ ಮಗಳಾಗಿ
ಉಸಿರಿರೋವರೆಗೂ ರಕ್ಷಿಸುವೆ ಕಣ್ಗಾವಲಾಗಿ

ಅನ್ನ ಅಕ್ಷರ ಆಶ್ರಯ ನೀಡಿದಳು ಕನ್ನಡಾಂಬೆ
ಸರ್ವರನ್ನು ರಕ್ಷಿಸಿ ಕಾಪಾಡುವಳು ಭಾರತಾಂಬೆ

ಸರ್ವ ಹೆಣ್ಣು ಮಕ್ಕಳಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರೀತಿಯ ಶುಭಾಷಯಗಳು

-ಶ್ರೀ ಮುತ್ತು ಯ.ವಡ್ಡರ ,ಶಿಕ್ಷಕರು
ಬಾಗಲಕೋಟೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ