ಇಂದು ಹರಪನಹಳ್ಳಿ ಮಂಡಲ ಬಿಜೆಪಿ ವತಿಯಿಂದ ಬರಗಾಲದ ಕಾರಣದಿಂದ ಹರಪನಹಳ್ಳಿ ತಾಲೂಕನ್ನು ಬರಪೀಡಿತ ತಾಲೂಕನ್ನಾಗಿ ಘೋಷಿಸಿ ಪ್ರತಿ ಒಂದು ಎಕರೆಗೆ 50 ಸಾವಿರ ರೂ. ಬೆಳೆ ಪರಿಹಾರವನ್ನು ನೀಡುವ ಬಗ್ಗೆ ಹಾಗೂ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲು ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಕಂದಾಯ ಸಚಿವರಾದ ಶ್ರೀ ಜಿ. ಕರುಣಾಕರ ರೆಡ್ಡಿ ಅವರು ಮಂಡಲ ಅಧ್ಯಕ್ಷರಾದ ಕೆ. ಶೇಖರಪ್ಪ,ಮುಖಂಡರಾದ ಬಾಗಳಿ ಕೊಟ್ರೇಶಪ್ಪ,ಜಿಲ್ಲಾ ಎಸ್. ಸಿ ಮೋರ್ಚಾ ಅಧ್ಯಕ್ಷರಾದ ಆರ್., ಮಂಜುನಾಥ್ ನಾಯ್ಕ್, ಜಿಲ್ಲಾ ಉಪಾಧ್ಯಕ್ಷರಾದ ಎ. ಜಿ ಮಂಜುನಾಥ, ಪ್ರಧಾನ ಕಾರ್ಯದರ್ಶಿಗಳಾದ ಸಿದ್ದೇಶ್, ಪಂಪಾ ನಾಯ್ಕ,ಮಂಡಲ ಉಪಾಧ್ಯಕ್ಷರಾದ ಸಿಂಗ್ರಿಹಳ್ಳಿ ನಾಗಣ್ಣ, ತಿಮ್ಮಣ್ಣ, ಗಂಗಾ ನಾಯ್ಕ, ಕಾರ್ಯದರ್ಶಿಗಳಾದ ಕೆಂಚಣ್ಣ, ಪ್ರಸನ್ನ, ಮಲ್ಲೇಶ, ಮಾಧ್ಯಮ ಸಂಚಾಲಕ ಬಸವರಾಜ್, ಖಜಾಂಚಿ ಮಾರುತಿ,bla 1 ಪೂರ್ಯಾ ನಾಯ್ಕ,ಮಹಿಳಾ ಮೋರ್ಚಾ ಅಧ್ಯಕ್ಷರಾದ ವಿಜಯಲಕ್ಷ್ಮಿ, ಒಬಿಸಿ ಮೋರ್ಚಾ ಅಧ್ಯಕ್ಷರಾದ ಮಂಜುನಾಥ, ಎಸ್ ಸಿ ಮೋರ್ಚಾ ಅಧ್ಯಕ್ಷರಾದ ನಿಂಗರಾಜ ,ಎಸ್ ಟಿ ಮೋರ್ಚಾ ಅಧ್ಯಕ್ಷರಾದ ಮನೋಜ,ರೈತ ಮೋರ್ಚಾ ಅಧ್ಯಕ್ಷರಾದ ಗುರುಲಿಂಗನ ಗೌಡ,ಮಾಜಿ ಪುರಸಭಾ ಸದಸ್ಯರಾದ ಕಿರಣ್,ವಿನಯ್ ,ಜಾವೀದ್ ,ತರಕಾರಿ ಹನುಮಂತಪ್ಪ, ವಾಗೀಶ್, ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
- ಕರುನಾಡ ಕಂದ ಸುದ್ದಿ




















