ಗದಗ ಜಿಲ್ಲೆಯ ರೋಣ ತಾಲೂಕು ಹೊಸಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿವಿಧ ಇಲಾಖೆಗಳಲ್ಲಿ ಸೇವೆಗೈದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಿ. ಎಸ್. ರೆಡ್ಡೇರ,
ಉಪನ್ಯಾಸಕರಾಗಿ ಆಗಮಿಸಿದ ಪಾಂಡುರಂಗ
ಮಾರ್ಪಡೆ, ಗ್ರಾಮಪಂಚಾಯತಿ ಅಧ್ಯಕ್ಷರಾದ ಶೋಭಾ ಗೊಟಗೇರಿ ಹಾಗೂ ಅತಿಥಿಗಳು ಸೇರಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆ ನೆರವೇರಿಸಿದರು.
ಹೊಸಳ್ಳಿ ಗ್ರಾಮದ ಎಲ್ಲಾ ಸಮಾಜದ ಗುರು ಹಿರಿಯರು ಡಾ. ಪಂಚಯ್ಯ ಹಿರೇಮಠ ನಿವೃತ್ತ ಮುಖ್ಯೋಪಾಧ್ಯಾಯರು, ಶಿವಪ್ಪ ಪರಸಪ್ಪ ತಳವಾರ ನಿವೃತ್ತ ಪಿ ಡಿ ಒ ಹೊಸಳ್ಳಿ, ಶಂಕರಗೌಡ ಪಾಟೀಲ್ ನಿವೃತ್ತ ಸಹಾಯಕ ಅಭಿಯಂತರರು ರೋಣ, ಮಲ್ಲಪ್ಪ ಹಂಪಳ್ಳಿ ನಿವೃತ್ತ ಶಿಕ್ಷಕರು ಪ್ರೌಢಶಾಲೆ ತೋರಣದಿನ್ನಿ, ಅಕ್ಬರ್ ಅಲಿ ನಿವೃತ್ತ ಸೈನಿಕರು ಹೊಸಳ್ಳಿ, ಮಲ್ಲಪ್ಪ ವಿ. ಮೇಟಿ ನಿವೃತ್ತ ಸೈನಿಕರು ಹೊಸಳ್ಳಿ ಇವರಿಗೆ ಗೌರವ ಸನ್ಮಾನ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಉಪನ್ಯಾಸಕರಾಗಿ ಪಾಂಡುರಂಗ ಮಾರ್ಪಡೆ ಮಾತನಾಡಿ ಗುರುಗಳೆಂದರೆ ದೇವರ ಸ್ವರೂಪ ಪಡೆದಂತೆ ಇವತ್ತು ನಮಗೆ ಗುರುಗಳು ಶಿಕ್ಷಣ ಕಲಿಸಿ ಕೊಟ್ಟಿದ್ದಕ್ಕೆ ಜ್ಞಾನದೀವಿಗೆ ಹೆಸರು ಬಂದಿದೆ ಎಂಬುದು ಸತ್ಯವಾದರೂ ಶಿಕ್ಷಕರನ್ನು ಪೂಜಿಸುವುದು ನಮ್ಮ ಕರ್ತವ್ಯ ಎಂದು ಮಕ್ಕಳಿಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಹೊಸಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಿವು ಜುಮ್ಮನಗೌಡ, ಶ್ರೀಮತಿ ಟಿ ಆರ್ ಆಲೂರು, ಪ್ರವೀಣ್, ಬಸವ ,
ಉಪಾಧ್ಯಕ್ಷರು ಗ್ರಾಮ ಪಂಚಾಯತಿ ಹೊಸಳ್ಳಿ ಶಿವಯೋಗಿ ತಡಿ, ರೇಖಾ ಮಾದರ, ಅನ್ನಪೂರ್ಣ ಇರಗಾರ, ಬಸಮ್ಮ ಸ್ಥಾವರಮಠ, ಕವಿತಾ ಕುರಿ, ಬಸಪ್ಪ ಮಾರನ ಬಸರಿ, ಬಿ ಎಸ್ ರಾಥೋಡ ಹಾಗೂ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಉಪಸ್ಥಿತರಿದ್ದರು.
ವರದಿ ಶರಣಪ್ಪಗೌಡ ಸಕ್ಕರಗೌಡರ




















