
ತಾಳಿಕೋಟೆ : ಕರ್ನಾಟಕ ಸರ್ಕಾರದ ಹೊಸ ಯೋಜನೆ ಪ್ರಜಾಸೇವೆ ಆಂದೋಲನ ಸಭೆಯನ್ನು ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಶ್ರೀ ಖಾಸ್ಗತೇಶ್ವರ ಸಭಾಭವನದಲ್ಲಿ ದಿನಾಂಕ 19 -9 -2026 ರಂದು ಹಮ್ಮಿಕೊಳ್ಳಲಾಗಿತ್ತು.
ತಹಶೀಲ್ದಾರ್ ಮಲ್ಲಿಕಾರ್ಜುನ ಎಸ್. ಅರಿಕೇರಿ ಅವರು ಸ್ವಾಗತವನ್ನು ಭಾಷಣವನ್ನು ನೆರವೇರಿಸಿದರು.
ನಂತರ ಮುದ್ದೇಬಿಹಾಳ ಮತಕ್ಷೇತ್ರದ ಜನಪ್ರಿಯ ಶಾಸಕರುಗಳಾದ ಶ್ರೀ ಮಾನ್ಯ ಸಿ ಎಸ್ (ಅಪ್ಪಾಜಿ) ನಾಡಗೌಡ ಅವರು ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮುಖಾಂತರ ಉದ್ಘಾಟಿಸಿ ಪ್ರಜಾ ಸೇವೆ ಆಂದೋಲನದಿಂದ ತಕ್ಷಣವೇ ಪರಿಹಾರ ಸಿಗುವ ಕುರಿತು ಅಧ್ಯಕ್ಷೀಯ ಭಾಷಣವನ್ನು ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ತಾಳಿಕೋಟೆ ತಾಲೂಕಿನ ಅಧಿಕಾರಿ ವೃಂದವು ಈ ವೇದಿಕೆಯನ್ನು ಹಂಚಿಕೊಂಡಿದ್ದರು.
ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು ,ಸ್ಥಳೀಯ ಪುರಸಭೆ ಮಾಜಿ ಸದಸ್ಯರುಗಳು ಮತ್ತು ತಾಲೂಕಿನ ಗ್ರಾಮಗಳ ರೈತರು, ಸಂಘಟನೆಗಳ ಕಾರ್ಯಕರ್ತರು,ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಸರ್ವರಿಗೂ ಅಧಿಕಾರಿ ವೃಂದ ಧನ್ಯವಾದಗಳನ್ನು ಸಲ್ಲಿಸಿದರು.
ಕಟ್ಟಡ ಕಾರ್ಮಿಕರಿಗೆ ಸರಕಾರದ ವತಿಯಿಂದ ಕಾರ್ಮಿಕರ ಸುರಕ್ಷತೆಯ ಕಿಟ್ಟನ್ನು ವೇದಿಕೆ ಮೇಲೆ ಹಂಚಲಾಯಿತು.
ಇದು ಸರಕಾರದ ಯೋಜನೆ ಉಚಿತವಾಗಿರುತ್ತದೆ ಎಂದು ತಹಶೀಲ್ದಾರ್ ಅವರು ಹೇಳಿದರು.
ವರದಿಗಾರರು ಸಂಗಮೇಶ ಸಿ ಚೌದ್ರಿ




















