ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವನಸಿರಿ ಫೌಂಡೇಶನ್ ವತಿಯಿಂದ ಹುಟ್ಟು ಹಬ್ಬದ ಅಂಗವಾಗಿ 101ಸಸಿಗಳು ವಿತರಣೆ:ರಮೇಶ ಕುನ್ನಟಗಿ

ರಾಯಚೂರು:ಸಿಂಧನೂರು ತಾಲೂಕಿನ ಕಾನಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಶರಣಬಸವ ಕಾನಿಹಾಳ ಅವರ ಹುಟ್ಟು ಹಬ್ಬದ ಅಂಗವಾಗಿ 101 ಸಸಿಗಳ ವಿತರಣೆ ಮತ್ತು ನೋಟ್ ಬುಕ್ ಕಿಟ್ಟುಗಳನ್ನು ಶಾಲಾ ಮಕ್ಕಳಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ತಾಲೂಕ ಅದ್ಯಕ್ಷ ರಮೇಶ ಕುನ್ನಟಗಿ ಅವರು ಮಾತನಾಡಿ ಈ ಅಧುನಿಕ ದಿನಗಳಲ್ಲಿ ಶುದ್ಧಗಾಳಿ ಪಡೆದುಕೊಳ್ಳಬೇಕಾದರೆ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಹುಟ್ಟುಹಬ್ಬವನ್ನು ಒಂದೊಂದು ಸಸಿ ನೆಡುವ ಮೂಲಕ ಆಚರಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ಗಾಳಿಯನ್ನು ಹಣದಿಂದ ಖರೀದಿಸುವ ದಿನಗಳು ಸಮೀಪಿಸಬಹುದು ಎಂದು ಕಳವಳ ವ್ಯಕ್ತಪಡಿಸಿ ಇಂದು ಇದೇ ಊರಿನ ಯುವಕರಾದ ಶರಣಬಸವ ಅವರು ತಮ್ಮ ಹುಟ್ಟು ಹಬ್ಬವನ್ನು ಸರಕಾರಿ ಶಾಲಾ ಮಕ್ಕಳಿಗೆ ಓದುವ ಹವ್ಯಾಸ ಮೂಡಿಸುವ ಕಿಟ್ಟುಗಳನ್ನು ಮತ್ತು ಒಂದೊಂದು ಸಸಿಗಳನ್ನು ವಿತರಿಸಿ ಆಚರಿಸಿಕೊಳ್ಳುವುದು ಸಮಾಜಕ್ಕೆ ಒಂದು ಉತ್ತಮ ಕೊಡುಗೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಯಮನಪ್ಪ ಮತ್ತು ಗ್ರಾಮಸ್ಥರಿಂದ ಶಾಲೆಗೆ ಟೇಬಲ್ ಮತ್ತು ಇತರ ಸಾಮಾಗ್ರಿಗಳನ್ನು ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ರೂವಾರಿಗಳಾದ ಮಹಾಂತೇಶ ರೌಡಕುಂದ SDMC ಅದ್ಯಕ್ಷರು ಬಸವರಾಜ,
ಶಾಲೆಯ ಮುಖ್ಯಗುರುಗಳಾದ ಕೃಷ್ಣಚಾರ್ಯ ವನಸಿರಿ ಫೌಂಡೇಶನ್ ಸದಸ್ಯರಾದ ಮಹಾಂತೇಶ ರೌಡಕುಂದ ಊರಿನ ಹಿರಿಯರು ಯಮನಪ್ಪ, ಹುಚ್ಚಪ್ಪ, ಗಂಗಪ್ಪ,ಶರಣಪ್ಪ ಕುರಲಿ, ಬಡಿಯಪ್ಪ ಕುರಕುಂದಿ, ವನಸಿರಿ ಫೌಂಡೇಶನ್ ಸದಸ್ಯರಾದ ವೆಂಕನಗೌಡ,ಬಸವರಾಜ, ನಾಗರಾಜ ಉಪ್ಪಲದೊಡ್ಡಿ, ಮೈಹೆಬೂಬ್ ರಮೇಶ ನಾಗಲಾಪೂರ ಹಾಗೂ ಶಾಲೆಯ ಶಿಕ್ಷಕರು,SDMCಸದಸ್ಯರು, ಊರಿನ ಹಿರಿಯರು,ಯುವಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ