ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಾಲೋಟಗಿಯ ಶಿವಯೋಗೇಶ್ವರ ಜಾತ್ರಾ ನಿಮಿತ್ಯ ಭರ್ಜರಿ ನೀರಾಟ !

ಇಂಡಿ : ತಾಲೂಕಿನ ಸಾಲೋಟಗಿ ಗ್ರಾಮದ ಶಿವಯೋಗೀಶ್ವರ ಜಾತ್ರಾ ನಿಮಿತ್ತ ನೀರಾಟವಾಡುವ ವಿಶೇಷ ಜಲಜಾತ್ರೆ ಸೋಮವಾರ ರಾತ್ರಿ ಜರುಗಿತು. ಪ್ರತಿ ವರ್ಷ ದವನದ ಹುಣ್ಣಿಮೆಯಿಂದ ಅಕ್ಷಯ ತದಿಗೆ ಅಮಾವಾಸ್ಯೆವರೆಗೂ ನಡೆಯುವ ಶಿವಯೋಗೀಶ್ವರ ಜಾತ್ರೆಯಲ್ಲಿ ಅಪರೂಪದ ನೀರಾಟಕ್ಕೆ ವಿಶೇಷವಾದ ಸ್ಥಾನವಿದೆ. ಒಂದು ಬಿಂದಿಗೆಗೆ ಶ್ರೀಗಂಧದ ಕಟ್ಟಿಗೆ ಜಡಿದು ಒಳಗೆ ನೀರು ಹೋಗದಂತೆ ಮಾಡಲಾಗುತ್ತದೆ. ಅದರ ಮೇಲೆ ಇಡೀ ರಾತ್ರಿಯೆಲ್ಲ ಭಕ್ತರು, ಬಿಂದಿಗೆ ಹೊತ್ತು ನೀರು ತಂದು ಸುರಿಸುತ್ತಾರೆ. ಒಂದು ಹನಿ ನೀರು ಸಹ ಹೋಗಲು ಸ್ಥಳಾವಕಾಶವಿಲ್ಲದ ಬಿಂದಿಗೆಯಲ್ಲಿ ನೀರು ತುಂಬಿಸುವ ಹರಸಾಹಸ ಭಕ್ತ ಜನರಿಂದ ರಾತ್ರಿಯಿಡಿ ನಡೆಯುತ್ತದೆ. ನಿರಾಟಕ್ಕೆ ದೇವಸ್ಥಾನದ ಆವರಣದಲ್ಲಿಯೇ ಇರುವ ಎರಡು ಐತಿಹಾಸಿಕ ಬಾವಿಗಳಲ್ಲಿ ಬೋರ್ವೆಲ್ ಗಳಿಂದ ನೀರನ್ನು ತುಂಬಿಸಲಾಗುತ್ತದೆ. ಆ ಬಾವಿಗಳಿಂದ ನೀರು ತುಂಬಿಕೊಂಡು ಶಿವಯೋಗೀಶ್ವರ ನಾಮ ಜಪಿಸುತ್ತಾ ತಂದು ಸುರಿಸುತ್ತಾರೆ. ಆ ಬಿಂದಿಗೆಯಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣದ ಮೇಲೆ ಮುಂಬರುವ ದಿನಗಳಲ್ಲಿ ಮಳೆ-ಬೆಳೆ ನಿರ್ಧಾರವಾಗುತ್ತದೆ. ಬಿಂದಿಗೆ ಪೂರ್ತಿ ತುಂಬಿದರೆ ಊರಿಗೆ ಸುಕಾಲ ಇಲ್ಲದಿದ್ದರೆ ಮತ್ತೆ ಬರದ ಸಂಕಷ್ಟ ಎದುರಾಗುತ್ತದೆ ಎಂಬ ಗಾಢವಾದ ನಂಬಿಕೆ ಈ ಭಾಗದ ಜನರಲ್ಲಿದೆ. ಈ ಅಪರೂಪ ಸಂಪ್ರದಾಯದ ಜಲ ಜಾತ್ರೆಗೆ ಸುತ್ತಮುತ್ತಲಿನ ಹಳ್ಳಿಯ ಅಪಾರ ಜನಸ್ತೋಮ ಆಗಮಿಸಿ ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ವರದಿ : ವಿಜಯಕುಮಾರ ಜಂಬಗಿ (ಇಂಡಿ)

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ