ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ತಿಪಟೂರು ಜೆಡಿಎಸ್ ನಲ್ಲಿ ಬಂಡಾಯದ ಬಿಸಿ

ಪಕ್ಷಕ್ಕೆ ಕರೆತಂದವರನ್ನೇ ಮೂಲೆಗುಂಪು ಮಾಡಲು ಹೊರಟ ಶಾಂತಕುಮಾರ್ ಗೆ ಚುನಾವಣೆಯಲ್ಲಿ ತಕ್ಕ ಪಾಠ ಮಲ್ಲಿಕಾರ್ಜುನ ಸ್ವಾಮಿ

ತಿಪಟೂರು-ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಲ್ಲಿಕಾರ್ಜುನ ಸ್ವಾಮಿ ಬಾಳೆಕಾಯಿ, ಮಾತನಾಡುತ್ತಾ ಕೆಲ ದಿನಗಳ ಹಿಂದೆ ತಿಪಟೂರು ಜೆ ಡಿ ಎಸ್ ಪಕ್ಷಕ್ಕೆ ಒಬ್ಬ ನಾಯಕನ ಹುಡುಕಾಟದಲ್ಲಿದ್ದಾಗ ಕಾಂಗ್ರೆಸ್ ನಿಂದ ಹೊರ ದಬ್ಬಲ್ ಪಟ್ಟಿದ್ದ ಕೆ ಟಿ ಶಾಂತಕುಮಾರ್ ರವರನ್ನು ನಾವೇ ಸಮಾಧಾನಪಡಿಸಿ ಜೆಡಿಎಸ್ ಪಕ್ಷಕ್ಕೆ ಕರೆತಂದಿದ್ದೆವು. ಆದರೆ ಇಂದು ನಮ್ಮನ್ನು ಪಕ್ಷದಲ್ಲಿ ನಿಕೃಷ್ಟವಾಗಿ ಕಾಣುತ್ತಿದ್ದು, ಹತ್ತಿದ ಏಣಿಯನ್ನೇ ದೂಡುವ ಮನಸ್ಥಿತಿಗೆ ಬಂದಿರುವುದು ದುರಾದೃಷ್ಟಕರ ಆದ್ದರಿಂದ ತಿಪಟೂರು ಜೆಡಿಎಸ್ ನ ಬಿ ಫಾರಂ ಪಡೆಯಲು ಈಗಾಗಲೇ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದು, ಟಿಕೆಟ್ ಸಿಗುವ ಭರವಸೆ ಇದೆ ಎಂದು ತಿಳಿಸಿದರು.

ತಾಲೂಕಿನ ಜೆಡಿಎಸ್ ಮೂಲ ಕಾರ್ಯಕರ್ತರಿಗೆ ಶಾಂತಕುಮಾರ್ ಅವಮಾನ ಪಡಿಸುತ್ತಿದ್ದು, ನಮ್ಮ ಸ್ವಾಭಿಮಾನಿ ಕಾರ್ಯಕರ್ತರ ಪರವಾಗಿ ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಇದೇ ಗುರುವಾರ ಅಥವಾ ಶನಿವಾರ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಸಬ ಹೋಬಳಿ ಅಧ್ಯಕ್ಷರಾದ ಕೆರಗೋಡಿ ಯೋಗಣ್ಣ, ಕಾರ್ಯಕರ್ತರಾದ ಕೆರಗೋಡಿ ಕುಮಾರಸ್ವಾಮಿ, ಹುಣಸೆಘಟ್ಟ ಕಾಂತರಾಜು, ಹಾಲ್ಕುರ್ಕೆ ಉಮಾಶಂಕರ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ