ಕರ್ನಾಟಕ ರಾಜ್ಯ ರೈತ ಸಂಘ ನಂಜನಗೂಡು ತಾಲ್ಲೂಕು ಘಟಕ ಮೈಸೂರು ಜಿಲ್ಲೆ ಇವರು ಸರ್ಕಾರಕ್ಕೆ ತಾಲ್ಲೂಕಿನ ರೈತರ ವಿವಿಧ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಹಕ್ಕೊತ್ತಾಯ ಪತ್ರ ನೀಡಿದರು.
ಪ್ರಮುಖ ಬೇಡಿಕೆಗಳು :
- ವಿದ್ಯುತ್ ಖಾಸಗೀಕರಣವನ್ನು ಕೈಬಿಡಬೇಕು, ಟಾಟಾ ವಿದ್ಯುತ್ ಕಂಪನಿಯು ಕೆ. ಇ ಆರ್. ಸಿ. ಗೆ ಟಾಟಾ ವಿದ್ಯುತ್ ಕಂಪನಿಯು ಸಲ್ಲಿಸಿರುವ ಆರ್ಜಿಯನ್ನು ತಿರಸ್ಕರಿಸಿ ವಿದ್ಯುತ್ ಖಾಸಗೀಕರಣವನ್ನು ಕೈಬಿಡಬೇಕೆಂದು ಆಗ್ರಹಿಸಿದರು.
- ರೈತ ವಿರೋಧಿ ಕಾಯಿದೆಗಳಾದ ಭೂಸುಧಾರಣೆ ಎ. ಪಿ. ಎಂ. ಸಿ. ವಿದ್ಯುತ್ ಕಾಯಿದೆಗಳನ್ನು ವಾಪಸ್ಸು ಪಡೆಯುತ್ತೇನೆಂದು ಹೇಳಿ ನುಡಿದಂತೆ ನಡೆಯುವ ಸರ್ಕಾರ ಈಗಾಗಲೇ 3 ವರ್ಷ ಕಳೆದಿದ್ದರೂ ಕಾಯಿದೆಗಳನ್ನು ವಾಪಸ್ಸು ತೆಗೆದುಕೊಂಡಿರುವುದಿಲ್ಲ ಈ ಕೂಡಲೇ 3 ಕಾಯಿದೆಗಳನ್ನು ವಾಪಸ್ಸು ಪಡೆಯಬೇಕು.
3. ಎಸ್. ಐ. ಆರ್. ಅನ್ನು ಮಾಡುತ್ತಿರುವುದು ಪಾರದರ್ಶಕವಿರಬೇಕು. - ಬಿಡದಿ ಟೌನ್ ಶಿಪ್ ಪ್ರಾಜೆಕ್ಟ್ ಅನ್ನು ಕೈ ಬಿಡಬೇಕು.
- ಗ್ಯಾಸ್ ಪೆಟ್ರೋಲ್ ಡೀಸಲ್ ಮತ್ತು ರಸಗೊಬ್ಬರ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು ಮತ್ತು ಎ ಫ್. ಐ. ಡಿ. ಅನ್ನು ರದ್ದು ಪಡಿಸಬೇಕು.
- ಮೈಕ್ರೋ ಫೈನಾನ್ಸ್ ಹಾವಳಿ ಮತ್ತು ಕಿರುಕುಳಗಳನ್ನು ತಡಗಟ್ಟಬೇಕು ಸರ್ಫೆಸಿ ಆಕ್ಟ್ ಮೈಕ್ರೋ ಫೈನಾನ್ಸ್ ಗಳ ಪರವಾಗಿದ್ದು, ಇದನ್ನು ರೈತರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ತಿದ್ದುಪಡಿ ಮಾಡಬೇಕು ಅಥವಾ ಸರ್ಫೆಸಿ ಆಕ್ಟ್ ಅನ್ನು ರದ್ದುಗೊಳಿಸಬೇಕು.
ಎಂದು ರೈತ ಸಂಘದ ಸಿರಾಮಳ್ಳಿ ಸಿದ್ದಪ್ಪ ಅಧ್ಯಕ್ಷರು ಹಾಗೂ ಹೆಜ್ಜಿಗೆ ಪ್ರಕಾಶ್ ಪ್ರಧಾನ ಕಾರ್ಯದರ್ಶಿಯವರು ಹಕ್ಕೊತ್ತಾಯ ಪತ್ರವನ್ನು ತಹಶೀಲ್ದಾರ್ ಡಾ. ಸ್ಮಿತಾ ರಾಮು ರವರಿಗೆ ಸಲ್ಲಿಸಿದರು.
ವರದಿ ಎಂ. ಮಹದೇವಯ್ಯ




















