ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನವಲಿ ಶ್ರೀ ಜಡೆ ಶಂಕರ ಲಿಂಗ ದೇವಸ್ಥಾನದಲ್ಲಿ ವಿಶೇಷ ಪೂಜೆ, ದಾಸೋಹ

ಇಲಕಲ್ಲ ತಾಲೂಕಿನ ಕಂದಗಲ್ಲ ಸಮೀಪದ ಐತಿಹಾಸಿಕ ಪ್ರಸಿದ್ಧ ಸುಕ್ಷೇತ್ರ, ಶಕ್ತಿಕೇಂದ್ರ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರ, ಸುಂದರ ಪರಿಸರದ ಕೃಷ್ಣನದಿ ದಡದಲ್ಲಿ ಇರುವ ಸುಂದರವಾದ ಪುಣ್ಯಕ್ಷೇತ್ರ ನವಲಿಯ ಜಡೆಯ ಶಂಕರಲಿಂಗ ದೇವಸ್ಥಾನದಲ್ಲಿ ಅಧಿಕ ಮಾಸ ಹಾಗೂ ಅಮಾವಾಸ್ಯೆಯ ವಿಶೇಷ ಪೂಜೆ, ಅಭಿಷೇಕ್ ಮತ್ತು ದಾಸೋಹ ಸೇವೆ ದೇವಸ್ಥಾನದ ಆವರಣದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.
ಚನ್ನಪ್ಪ ಹರಸೂರ ಮಸ್ಕಿ, ಅಧ್ಯಕ್ಷರು ದಾಸೋಹ ಸಮಿತಿ ಮತ್ತು ಅಧ್ಯಕ್ಷರು ಬಣಗಾರ್ ಸಿಂಪಿ ಸಮಾಜ ಬೆಂಗಳೂರು ಇವರು ಸಭೆ ಅಧ್ಯಕ್ಷತೆ ವಹಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸುಕ್ಷೇತ್ರ ನವಲಿ ಶ್ರೀ ಜಡೆಯ ಶಂಕರಲಿಂಗ ದೇವಸ್ಥಾನದಲ್ಲಿ ಪ್ರತಿ ಅಮಾವಾಸ್ಯೆ ದಿವಸ ವಿಶೇಷ ಕಾರ್ಯಕ್ರಮಗಳೊಂದಿಗೆ ಪ್ರಸಾದ ಸೇವೆ ಇದ್ದು ಭಕ್ತರು ಶ್ರದ್ಧಾ ಭಕ್ತಿಯಿಂದ ಭಾಗವಹಿಸಿ ಪ್ರತಿ ಅಮಾವಾಸ್ಯ ದಿವಸ ನೆಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವೀಗೊಳಿಸಬೇಕೆಂದು ದಾಸೋಹ ಸಮಿತಿಯ ಕಾರ್ಯದರ್ಶಿ ಸುರುಪುರದ ಪ್ರಕಾಶ ಬಣಗಾರ್ ಕರೆ ನೀಡಿದರು.
ಪ್ರತಿಯೊಬ್ಬ ಸಮಾಜ ಬಾಂಧವರು ಸುಕ್ಷೇತ್ರ ಶ್ರೀ ಜಡೆಯ ಶಂಕರಲಿಂಗ ದೇವಸ್ಥಾನಕ್ಕೆ ಆಗಮಿಸಿ ಅಭಿವೃದ್ದಿ ಹಾಗೂ ಸಂಘಟನೆ ಬಗ್ಗೆ ಚರ್ಚೆ,ಮತ್ತು ಬಣಗಾರ ಸಮಾಜದ ಕುಲ ಗುರು ಶರಣ ಶ್ರೀ ಶಂಕರ್ ದಾಸಿಮಯ್ಯಯನವರ ಜನ್ಮಸ್ಥಳ ಕಂದಗಲ್ಲ ಗ್ರಾಮದ ದೇವಸ್ಥಾನದ ಅಭಿವೃದ್ಧಿಯ ಬಗ್ಗೆ ಎಲ್ಲಾ ಸಮಾಜ ಬಾಂಧವರು ಮತ್ತು ಸದ್ಭಕ್ತರು ವಿಚಾರ ವಿನಿಮಿಯ ಮಾಡಿ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ಹಟ್ಟಿಯ ಶಿವರಾಜ್ ಕಂದಗಲ್ಲ ವಿನಂತಿಸಿಕೊಂಡರು. ವೀರೇಶ್ ಸಿಂಪಿ ಪತ್ರಕರ್ತರು ಹಾಗೂ ಅಧ್ಯಕ್ಷರು ಮೂಲ ಶರಣ ಶ್ರೀ ಶಂಕರದಾಶಿಮಯ್ಯ ಹಾಗೂ ಶಂಕರಲಿಂಗ ದೇವಸ್ಥಾನ ಕಂದಗಲ್ಲ, ಶೇಖರ ನಾಗಲಿಕರ್, ಉಮಾ ಹರಸೂರ ಮಸ್ಕಿ, ಬಸವರಾಜ ಸಮಾಳದ. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಸಮಾಜ ಸಂಘಟನೆ ಮತ್ತು ಅಭಿವೃದ್ಧಿ ಬಗ್ಗೆ ಜಗದೀಶ ಸರಾಫ್ ಇಲಕಲ್, ಶ್ರೀಧರ ಮಸ್ಕಿ ,ಅಂಬರೀಶ್ ಅರಸೂರ ಮಸ್ಕಿ ಮಾತನಾಡಿದರು.
ಈ ಸಂದರ್ಭದಲ್ಲಿ ವಾಸು ವೀರೇಶ ಅನೆಹೂಸೂರ, ಪಂಚಾಕ್ಷರಿ ಹಿರೇಮಠ, ವೈ ಬಿ ಚಳ್ಳಿಮರದ ಇನ್ನೂ ಅನೇಕ ಸಮಾಜ ಬಾಂಧವರು ಉಪಸ್ಥಿತರಿದ್ದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!