ಬೀದರ್ ಜಿಲ್ಲೆ ಔರಾದ್ ತಾಲ್ಲೂಕನ್ನು ಬರಗಾಲ ತಾಲೂಕ ಎಂದು ಘೋಷಿಸುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಔರಾದ್ ಘಟಕ ರಸ್ತೆ ತಡೆದು ಪ್ರತಿಭಟನೆ ನಡೆಸಿದೆ.
ಈ ಕುರಿತು ರಾಜ್ಯದ ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ತಾಲೂಕ ದಂಡಾಧಿಕಾರಿಗಳಿಗೆ ಸಲ್ಲಿಸಿದ ರೈತ ಸಂಘಟನೆಯ ಮುಖಂಡರು ಇದೇ ಸೆಪ್ಟೆಂಬರ್ 7ರಂದು ಇಲ್ಲಿನ ಎಪಿಎಂಸಿ ಕನ್ನಡಾಂಬೆ ವೃತದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದೆ ಈ ವರ್ಷ ಮಳೆ ಅಭಾವದಿಂದ ತಾಲೂಕಿನಲ್ಲಿ ಮುಂಗಾರು ಬೆಳೆಗಳಾದ ಉದ್ದು ಹೆಸರು ತೊಗರಿ ಇತರೆ ಬೆಳೆಗಳು ಬಾಡಿಕೊಂಡು ಹೂ ಬಿಡದೆ ಇಳುವರಿ ಕೊಡುವಲ್ಲಿ ವಿಫಲವಾಗಿದೆ ಮಳೆ ಅವಲಂಬಿತವಾದ ಬಿತ್ತದ ಬೆಳೆಗಳ ಮಳೆ ಕೊರತೆಯಲ್ಲಿ ಕೈ ಕೊಟ್ಟಿರುವುದರಿಂದ ರೈತರು ಕಂಗಲಾಗಿದ್ದಾರೆ ಅದಕ್ಕಾಗಿ ಸರ್ಕಾರ ಕೂಡಲೇ ಅವರು ಬರ ಪೀಡಿತ ತಾಲೂಕ ಎಂದು ಘೋಷಣೆ ಮಾಡುವ ಮೂಲಕ ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರೂಪಾಯಿಗಳನ್ನು ಪರಿಹಾರ ನೀಡಿ, ರೈತ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕೆಂದು ಮನವಿ ಮಾಡಿದ್ದಾರೆ ಒಂದು ವೇಳೆ ಸರ್ಕಾರ ಔರಾದ್ ತಾಲೂಕು ಬರ ತಾಲೂಕ ಎಂದು ಘೋಷಿಸದೆ ನಮ್ಮ ತಾಲೂಕಿನ ರೈತರ ಕೈ ಹಿಡಿಯದೆ ಹೋದರೆ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ತಾಲೂಕು ರೈತ ಸಂಘದ ಸರಕಾರಕ್ಕೆ ಪತ್ರ ಬರೆದು ಎಚ್ಚಿರಿಸಿದೆ.
ಈ ಸಂದರ್ಭದಲ್ಲಿ ರೈತ ಜಿಲ್ಲಾ ಸಂಘದ ಅಧ್ಯಕ್ಷರಾದ ಶ್ರೀಮಂತ್ ಬಿರಾದಾರ್ ಸಂಘದ ತಾಲೂಕ ಅಧ್ಯಕ್ಷರಾದ ಪ್ರಕಾಶ್ ಬಾವುಗೆ ಜಿರ್ಗ್ ಸಂಘಟನಾ ಕಾರ್ಯದರ್ಶಬಸವರಾ ಜ ರಾಜಕುಮಾರ್ ಪಾಟೀಲ್ ಬಾಬುರಾವ್ ಬಿರಾದಾರ್ ಹನುಮಂತರ ಬಿರಾದಾರ್ ಸತ್ಯವಾನ್ ಪಾಟೀಲ್ ಹೀಗೆ ಹಲವಾರು ಹಾಜರಿದ್ದರು.
ವರದಿ ಸಂಗಮೇಶ ಚಿದ್ರೆ




















