ಅಕ್ಕಿ ಕೊಟ್ಟು ಅನ್ನ ರಾಮಯ್ಯನಾಗುವದಕ್ಕಿಂತಲೂ ನೀರು ಕೊಟ್ಟರೆ ರೈತರೆಲ್ಲರೂ ಅನ್ನರಾಮಯ್ಯರಾಗುತ್ತಾರೆ:ನೂರ್ ಅಹ್ಮದ್
ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕು ಕೇಂದ್ರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ನಿನ್ನೆ ದಿನಾಂಕ 09-10-2023 ರಂದು ಬೃಹತ್ ಪ್ರತಿಭಟನೆ ನಡೆಯಿತು. ಮಲ್ಲಿಕಾರ್ಜುನ ಹಗರಟಗಿಯವರ ನೇತೃತ್ವದಲ್ಲಿ ವಿವಿಧ ಜಿಲ್ಲೆಗಳಿಂದ ಕರ್ನಾಟಕ ರಾಜ್ಯ ರೈತ ಸಂಘಟನೆಯ ಅಧ್ಯಕ್ಷರು ಮತ್ತು ರೈತ ಸಂಘಟನೆ ಪದಾಧಿಕಾರಿಗಳು,ಸದಸ್ಯರು ಬೃಹತ್ ಮಟ್ಟದಲ್ಲಿ ಹೋರಾಟವನ್ನು ಮಾಡಿ ತಹಶೀಲ್ದಾರ್ ರವರ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಪತ್ರವನ್ನು ಸಲ್ಲಿಸಿ ರೈತರು ವಿವಿಧ ರೀತಿಯ ತೊಂದರೆಗಳು ಮತ್ತು ಹಲವಾರು ಬೇಡಿಕೆಗಳಾದ ರೈತರಿಗೆ ಹಗಲೊತ್ತಿನಲ್ಲಿ ಸುಮಾರು ಏಳು ಗಂಟೆಗಳ ಕಾಲ ಪಂಪಸೆಟ್ ಗಳಿಗೆ ವಿದ್ಯುತ್ ಒದಗಿಸಬೇಕು,ಸಂಪೂರ್ಣ ನಮ್ಮ ಭೂಮಿ ಮಳೆಯ ಆಶ್ರಿತಿವಾಗಿರುವುದರಿಂದ ಈ ವರ್ಷ ಮಳೆಯ ಅಭಾವದಿಂದ ಎಲ್ಲಾ ಬೆಳೆಗಳು ಒಣಗಿ ಬರಡಾಗಿರುವುದರಿಂದ ಸಂಪೂರ್ಣ ಬರಗಾಲ ಗೋಷಣೆ ಮಾಡಿ ಪರಿಹಾರ ವಿತರಣೆ ಮಾಡಬೇಕು, ಬೆಳೆ ವಿಮೆ ಒದಗಿಸಬೇಕು,ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು ಈ ರೀತಿಯಾದ ಹಲವಾರು ರೈತರ ಬೇಡಿಕೆಯನ್ನು ತಹಶೀಲ್ದಾರ್ ಅವರ ಮುಖಾಂತರ ಮುಖ್ಯ ಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಪ್ರಶಾಂತಗೌಡ ಮಾಲಿ ಪಾಟೀಲ್ ರವರು ನಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಬೃಹತ್ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ಯಾದಗಿರಿ ಜಿಲ್ಲೆಯ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರಾದ ಮಲ್ಲನಗೌಡ ಹಗರಟಗಿಯವರು ಕೂಡಾ ನಮ್ಮ ಹೋರಾಟದ ಕೂಗು ಕೇಳಿ ನಮ್ಮೆಲ್ಲಾ ಬೇಡಿಕೆ ಈಡೇರಿಸದಿದ್ದರೆ ಬೆಂಗಳೂರಿನ ವಿಧಾನಸೌಧ ಮುತ್ತಿಗೆ ಹಾಕುತ್ತೇವೆ ಎಂದು ಸರ್ಕಾರದ ವಿರುದ್ದ ಗುಡುಗಿದರು,ಈ ಹೋರಾಟದಲ್ಲಿ ಯಾದಗಿರಿ ಜಿಲ್ಲಾಧ್ಯಕ್ಷರಾದ ಮಲ್ಲಣಗೌಡ ಹಗರಟಗಿ,ಪ್ರಶಾಂತಗೌಡ ಮಾಲಿ ಪಾಟೀಲ್,ರಾಜ್ಯ ಸಂಚಾಲಕರಾದ ನೂರ್ ಅಹ್ಮದ್, ರಾಜ್ಯ ಕಾರ್ಯದರ್ಶಿಗಳಾದ ಗುರುನಾಥ ರೆಡ್ಡಿ,ಮಲ್ಲನಗೌಡ,ಮಹಿಪಾಲ ರೆಡ್ಡಿ,ಸಂಗನಗೌಡ,ನಿಂಗನಗೌಡ,ನಾಗಯ್ಯ ಸ್ವಾಮಿ ಹಾಗೂ ರೈತ ಮುಖಂಡರು ಇತರರಿದ್ದರು.
ವರದಿ:ಚಂದ್ರಶಾಗೌಡ ಮಾಲಿ ಪಾಟೀಲ್




















