ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕವನದ ಶೀರ್ಷಿಕೆ:ನೋಡಿದೆ ನಾನು ನಿನ್ನ

ನನ್ನ ಬಾಜು ಊರ ಜಾತ್ರ್ಯಾಗ
ನನ್ನ ಹಿಂದ ನೀ ಬರುವಾಗ
ಕಳ್ಳಿತರ ಕದ್ದು ನೋಡಿ ಆಗ
ನಾನು ನೋಡಿನಿ ನಿನಗ ಈಗ//

ಎಷ್ಟು ಚಂದ ನಿನ್ನ ನಡಿಗೆ ನಿತ್ತು ನೋಡುವಂಗ
ಬಂದಾರ ಬಾರ ಜನದಾಗ ಜಾತ್ರೆ ಮಾಡುವಂಗ
ಜನ ಜಂಗುಳಿ ಜಾಸ್ತಿ ಆಯ್ತಾ ನೋಡ ಈಗ
ಜಾತ್ರೆಯ ಜನದಾಗ ಸಿಕ್ಕಿದೆ ನೋಡ ಈಗ//

ಕಂಡಂಗ ಕರಿಬೇಡ ನೋಡ
ಜಾತ್ರೆಯ ಜೇಬು ಜತನ ನೋಡ
ಎಷ್ಟಂತ ನಾನು ನಿನಗೆ ಸಂದೇಶ ಮಾಡಲಿ ನೋಡ
ಹೊಸ ಹುಮ್ಮಸು ಮುಖದಲ್ಲಿ ಮೂಡಿದೆ ನೋಡ//

ಸಂದೇಶ ಮಾಡೋಕೆ ಇಲ್ಲಿ ಕುಳಿತಿದ್ದೆ ನೋಡ
ಜಾಲಬಂದ ಸಿಗುತ್ತಾಇಲ್ಲ ಇಂದು ನೋಡ
ತಮಾಷೆ ಬೇಜಾರಾಗದೆ ಬಂದು ಹೋಗು ನೋಡು
ಗುಡಿಯ ಮುಂದೆ ಸುಮ್ಮನೆ ಮನಸ್ಸಿಗೆ ನೋಯಿಸಬೇಡ
ಹುಮ್ಮಸು ತುಂಬಿದೆ ಮನದಲ್ಲಿ ಕಷ್ಟಕೆ ಮುಹೂರ್ತವೆ ದಾರಿ//

-ಮಹಾಂತೇಶ ಖೈನೂರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ