ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪುಣೆಯಲ್ಲಿ ಗಮನ ಸೆಳೆದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ

ಮಹಾರಾಷ್ಟ್ರ:ಪುಣೆ ನಗರಿಯ ಚಿಂಚವಾಡ ಭಾಗದಲ್ಲಿರುವ ಎಲ್ಟ್ರೋ ಸಭಾಗೃಹದಲ್ಲಿ ಕನ್ನಡಿಗರ ನಮ್ಮವರ ಸಂಘ 68ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ಧ ನಮ್ಮವರ ಹಬ್ಬ ಕನ್ನಡಿಗರ ಹಬ್ಬ 2023 ರ ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಜನಪದ ಕಲಾವಿದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಅವರ ಜನಪದ ಹಾಡುಗಾರಿಕೆ ಹಾಸ್ಯ ಕಲಾ ಪ್ರದರ್ಶನ ಎಲ್ಲರ ಗಮನಸೆಳೆಯಿತು.
ಗವಿಶಿದ್ಧಯ್ಯ ನವರ
“ಗುರುವೇ ನಿನ್ನಾಟ ಬಲ್ಲವರು ಯಾರ್ಯರೋ” ತರವಲ್ಲ ತಂಗೀ ನಿನ್ನ ತಂಬೂರಿ ಸ್ವರ” ಮುಂತಾದ ಜನಪದ ತತ್ವ ಪದಗಳಿಗೆ ಚಪ್ಪಾಳೆ ತಟ್ಟುವದರೊಂದಿಗೆ ಗ್ರಾಮೀಣ ಶೈಲಿಯ ಹಾಸ್ಯ ಪ್ರಸಂಗದ ಮಾತುಗಳಿಗೆ ಜನ ನಗೆಗಡಲಲ್ಲಿ ತೇಲಿದರು.
ಕನ್ನಡ ನಾಡಿನ ಮೂಲ ಪರಂಪರೆಯ ಜನಪದ ಕಲೆಗಳ ಮಹತ್ವ ಸಾರಿದ ಗವಿಶಿದ್ಧಯ್ಯನವರು ತಮ್ಮ ಜನಪದ ಕಲೆಯ ಮೂಲಕ ಕನ್ನಡ ಪ್ರೇಮತ್ವ ತುಂಬಿದರು.
ವಾವ್ ಪವರ್ ಯೋಗದ ಸಂಸ್ಥಾಪಕಿಯಾದ ಕನ್ನಡತಿ ಡಾ.ಭಾಗೀರಥಿ,ಶ್ರೀ ಶಿವಲಿಂಗ ಡವಳೇಶ್ವರ,ಶ್ರೀ ಚಂದ್ರಕಾಂತ ಹಾರಕೋಡ,ನಮ್ಮವರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಬಸವರಾಜ ಹೀರೆಮಠ,ಬಸವರಾಜ ಪಟ್ಟಣಶೆಟ್ಟಿ,ಶರತ್ ಐರಾಣಿ,ಅವಿನಾಶ ಹೊಸಮನಿ,ಮುರಗೇಶ ಗಿರಿಸಾಗರ,ಅಮಿತ್ ಇನಾಮದಾರ,ಪರಾಗ ಮುಳಗುಂದ,ಬಿಂದು ಮಾಧವ ದೇಸಾಯಿ,ಜಾನ್ಸಿರಾವ್,ನೀಲಾ ಹೀರೆಮಠ,ಮಾಲತೇಶ ಕುಲಕರ್ಣಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪುಣೆಯ ನಮ್ಮವರ ಸಂಘ ಹಮ್ಮಿಕೊಂಡಿದ್ಧ ಕನ್ನಡ ರಾಜ್ಯೋತ್ಸವದ ಈ ಕಾರ್ಯಕ್ರಮದಲ್ಲಿ 600ಕ್ಕೂ ಅಧಿಕ ಜನರು ಭಾಗವಹಿಸಿದ್ಧರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ