ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಧಿವೇಶನದಲ್ಲಿ ಹನೂರು ಕ್ಷೇತ್ರದ ಅಭಿವೃದ್ಧಿಗೆ ಧ್ವನಿಯೆತ್ತಿದ ಶಾಸಕ ಎಂ.ಆರ್.ಮಂಜುನಾಥ್

ಹನೂರು:ಬೆಳಗಾವಿ ಅಧಿವೇಶನದಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಧ್ವನಿಯೆತ್ತಿದ ಶಾಸಕ ಎಂ.ಆರ್.ಮಂಜುನಾಥ್ ಅವರು ಅರಣ್ಯಹಕ್ಕು ಕಾಯ್ದೆ 2006 ರನ್ವಯ ಬಿ ರಾಜಯ್ಯನವರ ಕಾಲದಲ್ಲಿ ನಮ್ಮ ಕ್ಷೇತ್ರದಲ್ಲಿ ಸುಮಾರು 1437 ಕುಟುಂಬಗಳಿಗೆ ಅರಣ್ಯ ಕಾಯ್ದಡಿ ಒಂದರಿಂದ ಎಂಟು ಎಕರೆ ಅರಣ್ಯ ಭೂಮಿಗೆ ಹಕ್ಕು ಪತ್ರ ಪಡೆದಿರುವ ಪರಿಶಿಷ್ಟ ಪಂಗಡದ ಬುಡಕಟ್ಟು ಸೋಲಿಗ ಸಮುದಾಯದ ರೈತರು ಮತ್ತು ಇತರೆ ಸಮುದಾಯದ ರೈತರು ಸರ್ವೇ ನಂಬರ್ ಇರದ ಕಾರಣ ರಾಜ್ಯದ ಇತರೆ ರೈತರು ಪಡೆಯುತ್ತಿರುವ ವಿವಿಧ ಇಲಾಖೆಗಳ ಸೌಲಭ್ಯಗಳಿಂದ ವಂಚಿತರಾಗುತ್ತಿರುವ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಗಮನಕ್ಕೆ ತರಲಾಯಿತು.
ಅರಣ್ಯ ಕಾಯ್ದಡಿ ರೈತರಿಗೆ ನೀಡಲಾಗಿರುವ ಜಮೀನಿಗೆ ಬ್ಲಾಕ್ ನಂಬರ್ ನೀಡಲಾಗಿದೆ,ಆ ರೈತರು ಯಾವುದೇ ರೀತಿಯ ಸರ್ಕಾರ ಸೌಲಭ್ಯ ಪಡೆಯಲು ಆಗುತ್ತಿಲ್ಲ,ಆ ರೈತರ ಜಮೀನಿಗೆ ಯಾವುದೇ ರೀತಿಯ ಸರ್ವೇ ನಂಬರ್ ಇರುವುದಿಲ್ಲ ಆದರಿಂದ ಕಂದಾಯ ಸಚಿವರು ನಮ್ಮ ಕ್ಷೇತ್ರದ ರೈತರ ಕಡೆಗೆ ಗಮನ ನೀಡಬೇಕಾಗಿ ಕೋರಿದರು.
ಕಂದಾಯ ಸಚಿವ ಸಿ.ಕೃಷ್ಣ ಬೈರೇಗೌಡ ಅವರು ಅರಣ್ಯದಿಂದ ಬಿಡುಗಡೆಗೊಳಿಸಿದ ಪ್ರದೇಶದ ಗಡಿಯನ್ನು ಗುರುತಿಸಿ,ಆ ಗಡಿಯಿಂದ ಹೊರಗಡೆ ಇರುವಂತ ರೈತರಿಗೆ ಶಾಶ್ವತ ಪರಿಹಾರ ಕೊಡಲಾಗುವುದು,ಯಾವ ಜಮೀನು ಅರಣ್ಯದೊಳಗಿದೆ ಅಂತಹ ಜಮೀನುಗಳಿಗೆ ಪರಿಹಾರ ನೀಡುವುದು ಕಷ್ಟವಾಗುತ್ತದೆ, ಇವುಗಳನ್ನು ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಮಾಡಲಾಗುತ್ತದೆ ಎಂದರು.

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ