ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬೀದಿ ಬದಿ ವ್ಯಾಪಾರಸ್ಥರ ಸಂಘದಿಂದ ಪ್ರತಿಭಟನೆ

ಗದಗ ಜಿಲ್ಲಾ ಲಕ್ಷ್ಮೇಶ್ವರ ಪಟ್ಟಣದಲ್ಲಿ ಇಂದು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಯಿತು.ಈ ಪ್ರತಿಭಟನೆಯ ಮುಂದಾಳತ್ವವನ್ನು ಬೀದಿಬದಿ ವ್ಯಾಪಾರಸ್ಥ ಸಂಘದ ತಾಲೂಕ ಅಧ್ಯಕ್ಷರಾದ ಶ್ರೀ ಮಂಜುನಾಥ.ಬ.ಹೊಗೆಸೊಪ್ಪಿನ ವಹಿಸಿಕೊಂಡು ನಮ್ಮ ಬೀದಿ ಬದಿ ವ್ಯಾಪಾರಸ್ಥರ ಜೀವನಕ್ಕೆ ನೆರವಾಗುವಂತಹ ಬೇಡಿಕೆಗಳು ಈಡೇರುವವರೆಗೂ ನಮ್ಮ ಹೋರಾಟ ನಿಲ್ಲದು ಮತ್ತು ನಮ್ಮ ವ್ಯಾಪಾರಸ್ಥರಿಗೆ ಪೂರ್ಣ ಪ್ರಮಾಣದ ಪಟ್ಟಣ ಮಾರಾಟ ಸಮಿತಿ ರಚನೆ ಮಾಡಬೇಕು,ಬೀದಿ ಬದಿ ವ್ಯಾಪಾರಸ್ಥರಿಗೆ ವ್ಯಾಪಾರದ ಜಾಗ ಗುರುತುಪಡಿಸಿರುವುದಿಲ್ಲ,ಪಟ್ಟಣ ಮಾರಾಟ ಸಮಿತಿಗೆ ಕೋಟ್ಯಂತರ ಅನುದಾನ ಬಳಕೆ ಆಗದೆ ಸರ್ಕಾರಕ್ಕೆ ವಾಪಸ್ ಹೋಗುತ್ತಿದೆ ಅಲ್ಲದೆ ನಮ್ಮ ಜೀವನಕ್ಕೆ ಜೀವವಿಮೆ,ಆರೋಗ್ಯ ತಪಾಸಣೆ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಶ್ರೀ ಪರಶುರಾಮ ಬಳ್ಳಾರಿ,ಶ್ರೀ ಹನಮಂತ ರಾಮಗೇರಿ,ಶ್ರೀ ಮಂಜುನಾಥ ಬಸಾಪುರ,ಶ್ರೀ ಮಬೂಸಾಬ್ ಸುಂಡಕೆ,ಶ್ರೀಮತಿ ಸೋಮವ್ವ ಬೆಟಗೇರಿ,ಶ್ರೀ ರಾಜೇಸಾಬ್ ಮುಲ್ಲಾನವರ,ಶ್ರೀ ಮುನಿರಸಾಬ್ ಸಿದ್ದಾಪುರ,ಶ್ರೀ ಲಕ್ಷ್ಮಣ ಮುಳಗುಂದ,ಶ್ರೀ ಶಬ್ಬೀರ ಅಹಮದ ಶಿರಹಟ್ಟಿ,ಶ್ರೀ ಬಸಿರಸಾಬ್ ಬಾಗಲಕೋಟ ಮುಂತಾದವರು ಭಾಗವಹಿಸಿದ್ದರು.
ವರದಿ-ಸದಾಶಿವ ಭೀಮಪ್ಪ ಮುಡೆಮ್ಮನವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ