ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಆಯರಳ್ಳಿ ಪ್ರಭುಸ್ವಾಮಿ ದಂಪತಿಗಳಿಂದ ಬಸವ ಪೂಜೆ

ನಂಜನಗೂಡು:ಫ.ಗು.ಹಳಕಟ್ಟಿನಗರ ವೈ.ಕೆ.ಎಲ್ ಸ್ವಾಮಿ ಲೇಔಟ್ ನಲ್ಲಿ ನಡೆಯುತ್ತಿರುವ ಪ್ರವಚನ ಕಾಯ೯ಕ್ರಮದಲ್ಲಿ ನರಸಿಂಹರಾಜಪುರದ ಪೂಜ್ಯ ಶ್ರೀ ಬಸವಯೋಗಿಪ್ರಭುಗಳು ಪಾದೋದಕ ಮತ್ತು ಪ್ರಸಾದದ ಬಗ್ಗೆ ಅನುಭಾವ ನೀಡಿದರು.ಕರುಣೆ ವಿನಯ ಸಮತೆಯನ್ನು ಯಾರು ಅಳವಡಿಸಿಕೊಂಡಿರುತ್ತಾರೆಯೋ ಅವರಿಗೆ ಗುರು ಪಾದೋದಕ ಲಿಂಗಪಾದೋದಕ ಜಂಗಮ ಪಾದೋದಕ ದೊರಕುತ್ತದೆ ಇದರಿಂದ ಸಂಚಿತ ಕಮ೯ ಆಗಾಮಿ ಕಮ೯ ಪ್ರಾರಬ್ದ ಕಮ೯ಗಳು ನಾಶವಾಗುತ್ತವೆ.ಈ ಪಾದೋದಕಕ್ಕೆ ಯಾವುದೇ ಕ್ಷೇತ್ರದ ತೀಥ೯ ಸಮ ಬರುವುದಿಲ್ಲ,
ಪ್ರಸಾದವೆಂದರೆ ಕೇವಲ ಹೊಟ್ಟೆಗಾಗಿ ಮಾಡುವುದಲ್ಲ. ಜ್ಞಾನವನ್ನು ಪ್ರಸಾದವನ್ನಾಗಿ ಸ್ವೀಕರಿಸಬೇಕು.ಕಷ್ಟ ಸುಖ ಸೋಲು ಗೆಲುವು ನಿಂದನೆ ವಂದನೆ ಎಲ್ಲವನ್ನೂ ನಿರಾಕಾರ ಪರವಸ್ತುವಿನ ಪ್ರಸಾದವೆಂದು ತಿಳಿದು ತನು ಮನ ಭಾವ ಶುದ್ದದಿಂದ ತೆಗೆದುಕೊಳ್ಳಬೇಕು.ಈ ದೇಹವು ಕೂಡಲ ಸಂಗಮದೇವರನ್ನೊಲಿಸಲು ಬಂದ ಪ್ರಸಾದ ಕಾಯವೆನ್ನುತ್ತಾರೆ ಗುರುಬಸವಣ್ಣನವರು ಆದ್ದರಿಂದ ಕಾಯವನ್ನು ಮಧ್ಯಪಾನ ಧೂಮಪಾನಕ್ಕೆ ಸಿಕ್ಕಿಸಿ ಕಾಯವನ್ನು ಕೆಡಿಸಿಕೊಳ್ಳಬಾರದು.
ಅಂಗ ಚಪಲಕ್ಕೆ ಸಿಕ್ಕ ಸಿಕ್ಕಲ್ಲಿ ತಿನ್ನಬಾರದು ಸಾತ್ವಿಕ ಆಹಾರ ಮತ್ತು ಮಿತಪ್ರಸಾದಿಯಾಗಿರಬೇಕು ದೇವರ ಹೆಸರಿನಲ್ಲಿ ಹೋಮ ಯಾಗದ ಹೆಸರಿನಲ್ಲಿ ಪ್ರಸಾದ ವ್ಯಥ೯ವಾಗಬಾರದು ಪ್ರಸಾದ ತಯಾರು ಮಾಡುವವರು ಮತ್ತು ಸೇವಿಸುವವರ ಮನ ಮತ್ತು ಚಿತ್ತ ಟಿ.ವಿ ಮತ್ತು ಮೊಬೈಲ್ ನತ್ತ ಇರಬಾರದು ಶಿವಭಾವದಿಂದ ಇರಬೇಕು ಕೆಟ್ಟ ವಿಚಾರಗಳಿರಬಾರದು.
ಪ್ರಸಾದವನ್ನು ಹೆಚ್ಚು ನೀಡಿಸಿಕೊಂಡು ಚೆಲ್ಲಬಾರದು ಎಂದು ಅನುಭಾವ ನೀಡಿದರು ಎಂದಿನಂತೆ ಆಯರಳ್ಳಿ ಪ್ರಭುಸ್ವಾಮಿ ದಂಪತಿಗಳು ಬಸವ ಪೂಜೆ ನೇರವೇರಿಸಿದರು ಬಸವ ಭಕ್ತರಿಂದ ಬಸವ ಧ್ವಜಾರೋಹಣ ನಡೆಯಿತು ಬಸವ ಮಾಸ ಸಮಿತಿಯವರು ವಚನ ಶಾಲೆ ಮಕ್ಕಳು ಮತ್ತು ಅಕ್ಕಮಹಾದೇವಿ ವಿದ್ಯಾಥಿ೯ ನಿಲಯದವರು ವಚನಗಳನ್ನು ಹೇಳಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ