ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಮಾನತೆ ಸಹೋದರತ್ವದೊಂದಿಗೆ “ಟಿಪ್ಪು ಸುಲ್ತಾನ್‍ ಜಯಂತೋತ್ಸವ ಆಚರಣೆ.*

ಲಿಂಗಸುಗೂರು ಪಟ್ಟಣದಲ್ಲಿ ಇಂದು ಹಜರಾತ್ ಟಿಪ್ಪು ಸುಲ್ತಾನ್ ಸಂಘದ ವತಿಯಿಂದ “ಮೈಸೂರಿನ ಹುಲಿ” ಟಿಪ್ಪು ಸುಲ್ತಾನ್‍ ಜಯಂತೋತ್ಸವವನ್ನು ಆಚರಿಸಿದ್ದು ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಿಷ್ಠಾವಂತ ನಾಯಕ ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಸೇವಾಪ್ರತಿನಿಧಿ ಆರ್.ರುದ್ರಯ್ಯ ರವರ ಅಳಿಯ ಯುವ ಉದ್ಯಮಿ ಕೆ.ಕಿರಣ್ ರವರು ಹಲವು ಪಕ್ಷದ ಮುಖಂಡರೊಂದಿಗೆ ಬಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ.

“ಮೈಸೂರಿನ ಹುಲಿ” ಟಿಪ್ಪು ಸುಲ್ತಾನ್‍ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ಷರತ್ತುಗಳನ್ನು ನಿರ್ದೇಶಿಸುವಷ್ಟು ಪ್ರಬಲ ರಾಜರಾಗಿದ್ದರು ಅಲ್ಲದೆ “ಮೈಸೂರಿನ ಹುಲಿ” ಎಂದು ಕರೆಯಲ್ಪಡುವ ಅವರು ತಮ್ಮ ದೇಶದ ಸ್ವಾತಂತ್ರ್ಯವನ್ನು ಕಾಪಾಡಲು ದೀರ್ಘಕಾಲ ಮತ್ತು ಕಠಿಣವಾಗಿ ಹೋರಾಡಿದವರು, ಟೀಪು ಸುಲ್ತಾನ್ ಅತಿ ದೊಡ್ಡ ದೇಶ ಭಕ್ತರಾಗಿದ್ದು ಜೊತೆಗೆ ನಮ್ಮ ದೇಶಕ್ಕಾಗಿ ಹೋರಾಟ ಮಾಡಿ ಪ್ರಾಣ ಬಿಟ್ಟ ದಿಟ್ಟ ಹೋರಾಟಗಾರರಾಗಿದ್ದರು.

ಇಂತಹ ಮಹನೀಯರ ಜಯಂತಿಯನ್ನು ಇಂದು ಯಶಸ್ವಿಯಾಗಿ ಮುಸ್ಲಿಂ ಸಮುದಾಯದ ಜೊತೆಗೆ ಹಲವು ಸಮುದಾಯದ ಮುಖಂಡರು ಸೇರಿ ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಹಲವು ಪಕ್ಷದ ಮುಖಂಡರಗಳೊಂದಿಗೆ ಯುವ ಉದ್ಯಮಿ ಕೆ.ಕಿರಣ್ ಕಾಂಗ್ರೆಸ್ ಮುಖಂಡರುಗಳಾದ ಮಾಧವ್ ನೇಲೋಗಿ ಮಾ.ಜಿ.ಪಂ.ಸದಸ್ಯರು, ಬಸವನಗೌಡ ಪಾಟೀಲ್ ಕರಡ್ಕಲ್, ಪ್ರಭು ಹವಲ್ದಾರ್, ಸೋಮಣ್ಣ ದೇಸಾಯಿ, ನಂದಪ್ಪ ತವಗ, ದುರುಗಪ್ಪ ನಾಯಕ್, ಹಾಗೂ ಪಕ್ಷದ ಮುಖಂಡರು ಮತ್ತು ಆರ್.ರುದ್ರಯ್ಯ ಕಾಂಗ್ರೆಸ್ ಬೆಂಬಲಿಗರು ಹಾಗೂ ಅವರ ಅಭಿಮಾನಿ ಬಳಗದ ಸದಸ್ಯರು ಭಾಗಿಯಾಗಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ