ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಈ ಗುರುತು ನನ್ನದೇ…

ಈ ಗುರುತು ನನ್ನದೇ
ನಾನೇ ದಕ್ಕಿಸಿಕೊಂಡದ್ದು
ಬಂಧವೆಂಬ ಬಂಧನದಿ
ನೂರಾರು ಕಟ್ಟಳೆ ದಾಟಿ ಪಡೆದದ್ದು

ಗುರುತೇ ಇಲ್ಲದೆ ದುಡಿದು
ಎಲ್ಲವನ್ನೂ ಧಾರೆಯೆರೆದು
ಮೂಲೆ ಗುಂಪಾಗಿದ್ದು ಸಾಕಾಗಿ
ಈಗಲೇ ದಕ್ಕಿಸಿಕೊಂಡದ್ದು

ಈ ಗುರುತು ನನ್ನದೇ
ನಾನೇ ದಕ್ಕಿಸಿಕೊಂಡದ್ದು

ನಿನ್ನೆ ಮೊನ್ನೆಯದಲ್ಲ ಈ ಹೋರಾಟ
ಸಾವಿರಾರು ವರುಷಗಳೇ ಉರುಳಿ
ಮನದಿ ಮೂಡಿದ ಆಸೆಗಳ
ಸಮಾಧಿ ಮಾಡಿ
ಹೊಸ ಕನಸು ಕಂಡು ಹೊಸ ಲೋಕದಿ
ಇಂದೇ ದಕ್ಕಿಸಿಕೊಂಡದ್ದು

ಈ ಗುರುತು ನನ್ನದೇ
ನಾನೇ ದಕ್ಕಿಸಿಕೊಂಡದ್ದು

ಹೆಣ್ಣೆಂಬ ಭಾವದಿ ಹಿಂಜರಿದು
ಹೇಡಿಯಂತೆ ಬದುಕಿ
ನನ್ನ ಶಕುತಿಯ ಅರಿತು
ನನ್ನ ಮನದಲಿನ ಭಾವನೆಗಳಿಗೆ
ಜೀವನೀಡಿ ಹೊಸ ರೂಪ ಕೊಟ್ಟು
ಈಗಷ್ಟೇ ಕಂಡು ಕೊಂಡದ್ದು.

ಈಗಿನ ಈ ಗುರುತು ನನ್ನದೇ
ನಾನೇ ಪಡೆದದ್ದು…

ಯಾರೋ ನೀಡಿದ್ದಲ್ಲ…..

ರಚನೆ:ಲೋಹಿತೇಶ್ವರಿ ಎಸ್.ಪಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ