ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಾಯೆ

ಧನವೆಂಬ ಮಾಯೆ
ಬರಿಯ ಮಾಯೆ ಅಲ್ಲ
ಮನವನೇ ಮಾಯವಾಗಿಸುವ
ಮಾಯಾವಿ
ಬಂಧಗಳನ್ನೆಲ್ಲಾ…..ಬಂಧನವಾಗಿಸಿ…
ಒಂದೇ ಕ್ಷಣಕೆ ಉಸಿರುಗಟ್ಟಿಸಿ
ಜೀವ ಕಳೆವ ಮಾಯೆ….

ಅದರ ಪರವಾಗಿಯೇ

ನವಿರಾಗಿ ಸಾಗುತ್ತಿದ್ದ
ಬಾಳು
ಬಾಳಿನ ತುಂಬೆಲ್ಲಾ
ಇಂಚರದಂತಹ ಬಂಧ
ಬಂಧದ ಬಿಗಿಅಪ್ಪುಗೆಯಲಿ
ಬೆಚ್ಚಗಿನ ಭಾವ
ಜೀವನವೇ ಸುಖದ
ಸಾಗರದಂತಿತ್ತು

ಆದರೆ ಅಂದು ಹಣವಿರಲಿಲ್ಲ…!

ಎಲ್ಲವೂ ಕಳೆದುಕೊಂಡ
ಭಾವ
ನಿನಗೆ ನಾನೇ ಎಲ್ಲಾ ಎಂದು
ಮುದ್ದಿಸಿದ ಕೈಗಳು
ಕುತ್ತಿಗೆ ಹಿಸುಕಿ
…….ಕಾಲ
ಭದ್ರತೆಯ ಅಪ್ಪುಗೆ
ಮಾಯವಾಗಿ
ಬಂಜರು ಭೂಮಿಯಲ್ಲಿ
ಒಂಟಿಯಾಗಿ ನಿಂತ
ಭಾವ
ನಿಜ ಪ್ರೀತಿಗಾಗಿ
ಹಾತೊರೆಯುತಿರುವ
ಕಾಲ
ಇಂದು
ಒಲವು ಮಾತ್ರ ಇಲ್ಲ

ಎಲ್ಲವೂ ಮಾಯಾವಿಯ ಮಾಯೆ…..

ರಚನೆ ಲೋಹಿತೇಶ್ವರಿ ಎಸ್ ಪಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ