ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಏ.9 ರಂದು ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತವಾಗಿ ಮಂಗಳವಾರದಂದು ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಹೇರ್ ಸಲೂನ್ ಅಂಗಡಿಗಳು ಓಪನ್

ಕಲಬುರಗಿ:ಕಲಬುರಗಿ ಜಿಲ್ಲೆಯಲ್ಲಿ ಹಡಪದ ಅಪ್ಪಣ್ಣ ಸಮಾಜದ ಕ್ಷೌರದ ಅಂಗಡಿಯ ಮಾಲೀಕ ರಿಗೆ ತಿಳಿಸುವುದೇನೆಂದರೆ ಇದೇ ಏಪ್ರಿಲ್‌ 9 ರಂದು ಯುಗಾದಿ ಹಬ್ಬದ ಮತ್ತು ರಂಜಾನ್ ಹಬ್ಬದ ನಿಮಿತ್ತವಾಗಿ ಇದೇ ಏಪ್ರಿಲ್ 9 ರಂದು ಮಂಗಳವಾರ ದಿನದಂದು ಕಲಬುರಗಿ ನಗರದಲ್ಲಿ ಹಾಗೂ ಕಲಬುರಗಿ ಜಿಲ್ಲೆಯ ಒಳಪಡುವ ಎಲ್ಲಾ ತಾಲೂಕಿನಲ್ಲಿ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಭಾಗದಲ್ಲಿ ಸಹ ಹಡಪದ ಅಪ್ಪಣ್ಣ ಸಮಾಜದ ಕ್ಷೌರಿಕ ವೃತ್ತಿಯ ಹೇರ್ ಸಲೂನ್ ಅಂಗಡಿಗಳು ತೆರೆದಿರುತ್ತದೆ ಎಂದು ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜಿಲ್ಲಾಧ್ಯಕ್ಷರಾದ ಈರಣ್ಣಾ ಸಿ ಹಡಪದ ಸಣ್ಣೂರ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿಗಳು-ಬಸವರಾಜ ಸಿ ಹಡಪದ ಹಳ್ಳಿ ಶಹಾಬಾದ, ಕಲಬುರಗಿ ಜಿಲ್ಲೆಯ ಗೌರವಾಧ್ಯಕ್ಷರು ಬಸವರಾಜ ಹಡಪದ ಸುಗೂರ ಎನ್.ಜಿಲ್ಲಾ ಕಾರ್ಯಾಧ್ಯಕ್ಷರು ಭಗವಂತ ಹಡಪದ ಶಿಕ್ಷಕರು ಕಿರಣಗಿ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ನೀಲೂರ,ಜಿಲ್ಲಾ ಉಪಾಧ್ಯಕ್ಷರು ರುದ್ರಮಣಿ ಅಪ್ಪಣ್ಣ, ಮತ್ತು ಕಲಬುರಗಿ ನಗರಾಧ್ಯಕ್ಷ ಮಲ್ಲಿಕಾರ್ಜುನ ಸಾವಳಗಿ ಹಾಗೂ ಕಲಬುರಗಿ ತಾಲೂಕು ಅಧ್ಯಕ್ಷ ಚಂದ್ರಶೇಖರ ತೋನಸನಹಳ್ಳಿ ಸೇರಿದಂತೆ ಈ ಎಲ್ಲಾ ಮುಖಂಡರ ಅವರ ಆದೇಶದ ಮೇರೆಗೆ
ಕಲಬುರಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ -ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಅವರು ಈ ಪತ್ರಿಕೆ ಪ್ರಕಟಣೆಗೆ ತಿಳಿಸಿದ್ದಾರೆ.

ಯುಗಾದಿ ಹಬ್ಬ ಮಂಗಳವಾರ ಮತ್ತು ಏ.11 ರಂದು ಗುರುವಾರ ರಂಜಾನ್ ಹಬ್ಬದ ಬಂದ ಕಾರಣದಿಂದಾಗಿ ಈ ಇದೇ 9 ರಂದು ಮಂಗಳವಾರ ಒಂದು ದಿವಸ ಮಾತ್ರ ನಮ್ಮ ಹಡಪದ ಅಪ್ಪಣ್ಣ ( ಕ್ಷೌರಿಕ) ಸಮಾಜದ ವತಿಯಿಂದ.ಎಲ್ಲಾ ‘ಕ್ಷೌರದ” ಸಲೂನ್ ಅಂಗಡಿಗಳು ಓಪನ್ ಮಾಡುವುದಕ್ಕೆ ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ವತಿಯಿಂದ ಅನುಮತಿಯನ್ನು ನೀಡಿದೆ. ಮತ್ತೆ ಮುಂದೆ ಎಂದಿನಂತೆ ನಮ್ಮ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ನಿಯಮದಂತೆ ಮುಂದೆ ಪ್ರತಿ ಮಂಗಳವಾರ ತಮ್ಮ ಎಲ್ಲಾ ‘ಕ್ಷೌರದ” ಅಂಗಡಿಗಳು ಬಂಧ್ ಮಾಡಿ ನಿಯಮ ಪಾಲನೇ ಎಲ್ಲರೂ ಮಾಡಿಕೊಂಡು ಹೋಗಬೇಕು ಮತ್ತು ಪ್ರತಿಯೊಬ್ಬ ಗ್ರಾಹಕರು ಈ ಯುಗಾದಿ ಹಬ್ಬದ ಮತ್ತು ರಂಜಾನ್ ಹಬ್ಬವು ಇದೇ ಏಪ್ರಿಲ್ 9 ಮತ್ತು 11 ರಂದು ರಂಜಾನ್ ಹಬ್ಬ,ಹಿಂದು ಮುಸ್ಲಿಂ ಧರ್ಮದ ಎರಡು ದೊಡ್ಡ ಹಬ್ಬದ ಸಂಭ್ರಮ ಆಚರಣೆಯ ಬಂದಿರುವುದರಿಂದ ಇದೇ ಏಪ್ರಿಲ್ 9 ಮಂಗಳವಾರ ದಿನದಂದು ತಮ್ಮ ಸೇವೆ ಮಾಡಲು ನಮ್ಮ ಎಲ್ಲಾ ಕ್ಷೌರ ವೃತ್ತಿಯ ಕಾಯಕ ಭಾಂಧವರು ಸೇವೆಯಲ್ಲಿ ಸನ್ನಧರಾಗಿರುತ್ತಾರೆ.ಆದ ಕಾರಣ ಸಾರ್ವಜನಿಕರು.(ಗ್ರಾಹಕರು) ತಾವೆಲ್ಲರೊ ಸಹಕರಿಸಬೇಕೆಂದು ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಗಳಾದ ಡಾ.ಮಲ್ಲಿಕಾರ್ಜುನ. ಬಿ.ಹಡಪದ ಸುಗೂರ ಎನ್ ಅವರು ಈ ಈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ