ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸ್ವರ್ಣವಲ್ಲಿ ಮಠದಲ್ಲಿ ಶ್ರೀ ನರಸಿಂಹ ಜಯಂತಿ

ಶಿರಸಿ:ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ,ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನ (ರಿ.)ಸೋಂದಾ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಶ್ರೀ ಲಕ್ಷ್ಮೀನೃಸಿಂಹ జయంతిಯನ್ನು ದಿನಾಂಕ 21-05-2024 ಮತ್ತು 22-05-2024ರಂದು ಸುಧರ್ಮಾ ಸಭಾಂಗಣ ಸ್ವರ್ಣವಲ್ಲೀ ಸಂಸ್ಥಾನ ಇಲ್ಲಿ ಜರುಗುವುದು.

ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನ (ರಿ.)ಇದರ ವತಿಯಿಂದ ಕೃಷಿ ಜಯಂತಿ,ವಿಚಾರ ಗೋಷ್ಟಿ,ಸಾಂಸ್ಕೃತಿಕ ಸ್ಪರ್ಧೆಗಳು,ಕೀರ್ತನೆ,ಯಕ್ಷ ಶಾಲ್ಮಲಾದಿಂದ ‘ಚಂದ್ರಹಾಸ’ ಯಕ್ಷಗಾನ ಪ್ರದರ್ಶನ ಹಾಗೂ ಅನೇಕ ವಿಶೇಷ ಕಾರ್ಯಕ್ರಮಗಳು ಕೂಡಾ ಜರುಗುವುದು ಎಂದು ಶ್ರೀ ಸ್ವರ್ಣವಲ್ಲಿ ಮಠ ಪ್ರಕಟಣೆ ತಿಳಿಸಿದೆ.

ದಿನಾಂಕ 22.05.224ರಂದು ಶ್ರೀ ಲಕ್ಷ್ಮೀನೃಸಿಂಹ ಜಯಂತಿ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಈ ಕೆಳಗಿನಂತೆ ಆಯೋಜಿಸಲಾಗುವುದು-
ಗಣಪತಿಪೂಜಾ,ಅನ್ನೋದಕಾನಯನಂ,ಪುಣ್ಯಾಹ, ಲಘ್ರಧಿವಾಸ ಹೋಮ,ರಥಶುದ್ದಿ ಹೋಮ,ರಥಶುದ್ಧಿ, ಅಧಿವಾಸ ಕಲಶಾಭಿಷೇಕ,ಶತರುದ್ರ ಅಭಿಷೇಕ, ಫಲಪಂಚಾಮೃತ ಅಭಿಷೇಕ,ಮಹಾಪೂಜೆ, ಮಂಗಳಾರತಿ,ತೀರ್ಥ ಪ್ರಸಾದ,ಮಹಾಸಂತರ್ಪಣೆ, ಹೊರೆಗಾಣಿಕೆ ಸಮರ್ಪಣೆ ಇತ್ಯಾದಿ.
ಸಂಜೆ: ಕಲಶ ಜಲ ಪ್ರೋಕ್ಷಣ,ಲಘ್ರಧಿವಾಸ ಹೋಮ, ಕಲ್ಲೋಕ್ತ ಮಹಾಪೂಜೆ,ಮಹಾರಥೋತ್ಸವ ಮೃಗಬೇಟೆ (ಮದ್ದು-ಗುಂಡು ಸೇವೆ),ಅಷ್ಟಾವಧಾನ ಸೇವೆ.

ಶ್ರೀ ಮಠದ ಶಿಷ್ಯರು,ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಅನುಗ್ರಹ ಹಾಗೂ ಶ್ರೀಗಳ ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಶ್ರೀ ಸ್ವರ್ಣವಲ್ಲಿ ಮಠದ ಪರವಾಗಿ ಶ್ರೀ ದತ್ತಾತ್ರಯ ಹೆಗಡೆ, ಲಿಂಗದಕೋಣ,ವ್ಯವಸ್ಥಾಪಕರು,ಶ್ರೀ ವಿಶ್ವೇಶ್ವರ ನ. ಹೆಗಡೆ ಬೊಮ್ನಳ್ಳಿ ಅಧ್ಯಕ್ಷರು,
ಹಾಗೂ ಶ್ರೀ ಮಠದ ಆಡಳಿತ ಮಂಡಳಿ ಹಾಗೂ ಸರ್ವ ಸಂಘಟನೆಗಳ ಅಧ್ಯಕ್ಷರು,ಕಾರ್ಯದರ್ಶಿಗಳು ಮತ್ತು ಎಲ್ಲ ಸದಸ್ಯರು ವಿನಂತಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವರದಿ:ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ