ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಂಚನೆಯಆರೋಪ:ಕಾಂಗ್ರೆಸ್ ಶಾಸಕ ಡಾ:ಅಜಯಸಿಂಗ್ ಮಾಜಿ ಆಪ್ತ ಸಹಾಯಕನ ಬಂಧನ

ಜೇವರ್ಗಿ: ಸರಕಾರಿ ನೌಕರಿ ಹಾಗೂ ಕಾಮಗಾರಿಗಳನ್ನು ಕೊಡಿಸುತ್ತೇನೆಂದು ಹೇಳಿ ವಂಚಿಸಿದ ಕೆ ಕೆ ಆರ್ ಡಿ ಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ:ಅಜಯ್ ಧರ್ಮಸಿಂಗ್ ಅವರ ಮಾಜಿ ಆಪ್ತ ಸಹಾಯಕ ಪರಶುರಾಮ ಪಾಟೀಲ್ ವಿರುದ್ಧ ಮೋಸ,ವಂಚನೆ ಮತ್ತು ನಂಬಿಕೆಯ ಉಲ್ಲಂಘನೆ (420, 406)ಕುರಿತು ಪ್ರಕರಣ ದಾಖಲಾಗಿದೆ.
2020ರಿಂದ 2024 ರವರೆಗೆ ಡಾ.ಅಜಯ್ ಧರ್ಮಸಿಂಗ್ ಅವರ ಬಳಿ ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಪರಶುರಾಮ ಪಾಟೀಲ್ ನೆಲೋಗಿ ಇವರು ಸರಕಾರಿ ನೌಕರಿ ಹಾಗೂ ಕಾಮಗಾರಿಗಳನ್ನ ಕೊಡಿಸುವುದಾಗಿ ಹಣ ಪಡೆದು “32” ಜನ ಕಾಂಗ್ರೆಸ್ ಕಾರ್ಯಕರ್ತರಿಗೆ ವಂಚಿಸಿದ್ದಾನೆ ಎಂದು ಜೇವರ್ಗಿ ಪೊಲೀಸ್ ಠಾಣೆಗೆ ಬಂದು ವಂಚಿತರು ದೂರು ನೀಡಿದ್ದರು.
ಈ ರೀತಿಯಾಗಿ ಮೋಸಕ್ಕೊಳಗಾದ ಜನರು ಶಾಸಕರ ಬಳಿ ದೂರು ಹೇಳಿದ್ದರು.ಹಲವರ ಹಣವನ್ನು ಕೊಡಿಸುವಲ್ಲಿ ಶಾಸಕರು ಕೂಡ ಸಹಾಯ ಮಾಡಿದ್ದರು. ನಂತರ ಮಾಹಿತಿ ಪಡೆದು ಡಾ.ಅಜಯಸಿಂಗ್ ಅವರು ವರ್ಷದ ಹಿಂದೆಯೆ ಪರಶುರಾಮ ಅವರನ್ನು ಆಪ್ತ ಸಹಾಯಕ ಸ್ಥಾನದಿಂದ ತೆಗೆದುಹಾಕಿದ್ದರು.
ಮೋಸ ಹೋದವರಲ್ಲಿ ಬೀದರ,ಕಲಬುರಗಿ,ಸುರಪುರˌ ಜೇವರ್ಗಿ ಮತ್ತು ಯಡ್ರಾಮಿಗೆ ಸೇರಿದ ಕಾಂಗ್ರೆಸ್ ಮುಖಂಡರಿದ್ದಾರೆ.ಪೊಲೀಸರು ಪರಶುರಾಮ ಅವರನ್ನು ಬಂದಿಸಿದ್ದು ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ:ಚಂದ್ರಶಾಗೌಡ ಮಾಲಿ ಪಾಟೀಲ್ (ಜೇವರ್ಗಿ)

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ