ಕಲಬುರಗಿ: 6/7/2024ರಂದು ಮಧ್ಯಾಹ್ನ 2.00 ಕ್ಕೆ ಶೃಂಗೇರಿ ಜಗದ್ಗುರು ಶ್ರೀ ಶ್ರೀ ಭಾರತಿ ತೀರ್ಥ ಸ್ವಾಮೀಜಿ ಮಹಾ ಸನ್ನಿಧಾನಂಗಳವರ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವದ ಅಂಗವಾಗಿ ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತಿಯವರ ದಿವ್ಯ ಮಾರ್ಗದರ್ಶನದೊಂದಿಗೆ ಶ್ರೀ ಶಂಕರ ಉಪದೇಶ ಅಮೃತ ಆಧ್ಯಾತ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ಚಿತ್ತಾಪುರದ ಶ್ರೀ ರಾಘವೇಂದ್ರ ಸ್ವಾಮಿ ಮಠ ಬ್ರಾಹ್ಮಣ ಗಲ್ಲಿ ಚಿತ್ತಾಪುರದಲ್ಲಿ 2.30.ನಿಮಿಷಕ್ಕೆ ಆಯೋಜಿಸಲಾಗಿದೆ ಕಾರಣ ಸಮಸ್ತ ವಿಪ್ರಭಾಂಧವರು ಶ್ರೀ ಶ್ರೀ ಪರಮಪೂಜ್ಯ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮಿಗಳು, ಚೈತನ್ಯ ರಾಜಾರಾಮ್ ಕ್ಷೇತ್ರ ಶಿರಳಗಿ ತಾಲೂಕ ಸಿದ್ದಾಪುರ ಇವರು ಆಗಮಿಸಿ ತಮ್ಮ ಆಧ್ಯಾತ್ಮಿಕ ಉಪನ್ಯಾಸ ಸುಧೆಯನ್ನು ನಮಗೆ ಧಾರೆಯೆರೆಯುತ್ತಿದ್ದಾರೆ. ಆ ಜ್ಞಾನಸುಧೆಯನ್ನು ಸವಿದು ನಮ್ಮ ಜೀವನ ಪಾವನಗೊಳಿಸೋಣ. ಕಾರಣ ಸಮಸ್ತ ಚಿತ್ತಾಪುರ ವಿಪ್ರಭಾಂಧವರು ಆಗಮಿಸಿ ಶ್ರೀ ಗುರುಗಳ ಕೃಪೆ ಗೆ ಪಾತ್ರರಾದರು.
ಮಹಿಳೆಯರು ಭಜನಾ ಮಂಡಳಿಯ ಕಳಸ ಕುಂಬದೊಂದಿಗೆ ಕಾಯ ವಾಚ ಮನಸ್ಸಿನಿಂದ ಶ್ರೀಗಳನ್ನು ಸ್ವಾಗತಿಸಿದರು ಹಾಗೂ ಪುರುಷರು ಸಾಂಪ್ರದಾಯಿಕ ಉಡುಪಿನಲ್ಲಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಅಧ್ಯಕ್ಷರು ಶ್ರೀ ಗಿರೀಶ್ ಪಿ ಜಾನಿಬ,ಸಂಪತ್ ನಾಡಗೌಡ, ನರಹರಿ ಡಿ ಕುಲಕರ್ಣಿ, ದೇವಿ ದಾಸ್ ಕುಲಕರ್ಣಿ, ನರಸಿಂಹ ಕುಲಕರ್ಣಿ ಬಾರ್ಪೇಟ ಇನ್ನಿತರ ಬ್ರಾಹ್ಮಣ ಸಮಾಜ ಹಿರಿಯ ಹಾಗೂ ಕಿರಿಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




















