ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ವಾರ್ಡ್ ನಂಬರ್ 3 ರಲ್ಲಿ ಮಹಾದೇವಪ್ಪ ತಂದೆ ಮರೆಪ್ಪ ಮುನ್ನಮುಟ್ಟಿಗಿ ಇವರ ಮನೆಯಿಂದ ಹಣಮಂತ ಬುದಿನಾಳ ಮನೆಯವರಿಗೆ 12 ಫೀಟ್ ರಸ್ತೆ ಇರುತ್ತದೆ ಸಿಸಿ ರಸ್ತೆ ಮತ್ತು ಚರಂಡಿ ಮಾಡದ ಕಾರಣ ಇಲ್ಲಿ ಕೆಲವು ಕಡೆ ತ್ಯಾಜ್ಯ ವಸ್ತು ಹಾಕಿ ಮತ್ತು ಜಾಲಿ ಗಿಡ ಬೆಳೆದಿದ್ದು ಮಳೆ ಬಂದರೆ ಚರಂಡಿ ಇಲ್ಲದ ಕಾರಣ ಕೆಲವು ಮನೆಯ ಮುಂದೆ ನೀರು ನಿಂತು ಮನೆಗಳಿಗೆ ನೀರು ನುಗ್ಗಿ ತೊಂದರೆಯಾಗಿದೆ ಇಲ್ಲಿ ಹಲವಾರು ವಿಷಕಾರಿ ಹಾವು ಮತ್ತು ಚೇಳು ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಆದುದರಿಂದ ಡೆಂಗು ಜ್ವರ,ಮಲೇರಿಯಾ, ಟೈಫಾಯಿಡ್ ನಂತಹ ಇತರೆ ಕಾಯಿಲೆಗಳು ಕಂಡುಬಂದಿದ್ದು ಇದರ ಬಗ್ಗೆ ಸುಮಾರು ವರ್ಷಗಳಿಂದ ಸಂಬಂಧಪಟ್ಟ ಜನಪ್ರತಿನಿಧಿಗಳಿಗೂ ಗ್ರಾಮ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಅಧಿಕಾರಿಗಳಿಗೂ ಮನವಿ ಕೊಟ್ಟಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಇದರ ಬಗ್ಗೆ ವಾರ್ಡಿನ ಜನರು ಕೂಡಿ ವಡಗೇರದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ. ಇದುವರೆಗೂ ಕೂಡಾ ಅಧಿಕಾರಿಗಳು ಯಾವುದೇ ಪರಿಶೀಲನೆ ಮಾಡಿಲ್ಲ ಕ್ರಮ ಕೈಗೊಂಡಿಲ್ಲ ಎಂದು 3ನೇ ವಾರ್ಡಿನ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ವರದಿ:ಶಿವರಾಜ ಸಾಹುಕಾರ್ ವಡಗೇರಾ




















